ರಕ್ತದೊತ್ತಡ, ಸಕ್ಕರೆ ಖಾಯಿಲೆ ತಡೆಗೆ – ನಿಯಮಿತ ಪರೀಕ್ಷೆ ಮಾಡಿಸಿರಿ.
ಹೊನ್ನಾಕಟ್ಟಿ ಫೆ.12

ಹೊನ್ನಾಕಟ್ಟಿ ಗ್ರಾಮದಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಹೊನ್ನಾಕಟ್ಟಿ ಗ್ರಾಮದಲ್ಲಿ ನಮ್ಮ ಆರೋಗ್ಯ ಸ್ವಯಂ ರಕ್ಷಣಾ ಮುಂಜಾಗರತೆ ಕ್ರಮಗಳ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಗ್ರಾಮದ ಮುಖಂಡರಾದ ವಾಸು ರಾಮಚಂದ್ರ ಜಾಧವ, ಮಲ್ಲನಗೌಡ ಗೌಡರ, ಪಾಂಡಪ್ಪ ಗೌಡರ ಹನಮಂತ ಅನವಾಲ್, ಲಕ್ಷ್ಮಣ ಬಡಿಗೇರ ಬಸಪ್ಪ ಲೊಂಡವೆ, ರಂಗಪ್ಪ ಬೇವಿನಮಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ರಾಷ್ಟ್ರೀಯ ವಿವಿಧ ಆರೋಗ್ಯ ಕಾರ್ಯಕ್ರಮಗಳ ವೈಜ್ಞಾನಿಕ ಮಾಹಿತಿ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮುಂಜಾಗ್ರತೆಯ ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸುವದರಿಂದ ವೈಯಕ್ತಿಕ ಕುಟುಂಬ ಸಮಾಜದ ಆರೋಗ್ಯಕರ ವಾಗಿಡಲು ಸಾಧ್ಯವಾಗುತ್ತದೆ. ಸೊಳ್ಳೆ ಕಡಿತ ತಪ್ಪಿಸಿ ಕೊಳ್ಳಿ ಮಲೇರಿಯಾ ಡೆಂಗ್ಯೂ ಚಿಕೂನ್ ಗುನ್ಯಾ ದೂರ ತಳ್ಳಬಹುದು ಲಾರ್ವಾ ಉತ್ಪತ್ತಿ ಯಾಗದಂತೆ ಸುತ್ತ ಮುತ್ತ ಪರಿಸರ ಸ್ವಚ್ಛತೆ, ಸೊಳ್ಳೆ ಪರದೆ ನಿರೋಧಕ ಬಳಸಬೇಕು. ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು. ವಾಂತಿ ಬೇಧಿ ತಡೆಗೆ ಶುದ್ಧ ನೀರು ಸೇವನೆ, ಪೋಷಕಾಂಶ ಯುಕ್ತ ಆಹಾರ ಸೇವಿಸಬೇಕು. ಆಧುನಿಕತೆಯ ಆಹಾರ ಪದ್ಧತಿ ಗುಟ್ಕಾ ಸಿಗರೇಟ್ ಮದ್ಯಪಾನ ಸೇವನೆಯಿಂದ ಮಧುಮೇಹ ರಕ್ತದೊತ್ತಡ, ನರದೌರ್ಬಲ್ಯ, ಪಾರ್ಶವಾಯು, ಕ್ಯಾನ್ಸರ್, ನಿಶಕ್ತ ಬರುವ ಸಾಧ್ಯತೆ ಹೆಚ್ಚು ಆದುದರಿಂದ ಮುನ್ನೇಚ್ಚರಿಕೆ ಯಾಗಿ ಯೋಗ ಅಳವಡಿಸಿ ಕೊಳ್ಳಬೇಕು.ಕುಷ್ಠರೋಗ ಮುಕ್ತ ಸಮಾಜಕ್ಕಾಗಿ ಸ್ಪರ್ಶ ಜ್ಞಾನವಿಲ್ಲ ತದ್ದು ಮಚ್ಚೆ ಕಾಣಿಸಿದರೆ ನಿರ್ಲಕ್ಷ್ಯ ಬೇಡ ವೈದ್ಯರಲ್ಲಿ ಪರೀಕ್ಷಿಸಿ ಕೊಳ್ಳಿ, ಕುಷ್ಠರೋಗ ಬಹುಔಷಧ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖ, ಶೀಘ್ರ ಪತ್ತೆ ಶೀಘ್ರ ಚಿಕಿತ್ಸಯಿಂದ ಕುಷ್ಠರೋಗ ಸಂಪೂರ್ಣ ಗುಣಮುಖ. ಆರೋಗ್ಯವಂತ ಕುಟುಂಬಕ್ಕೆ ಮುಂಜಾಗ್ರತೆಯಾಗಿ ಮೂವತ್ತು ವರ್ಷ ಮೇಲ್ಪಟ್ಟ ಮಧುಮೇಹ ರಕ್ತದೊತ್ತಡ ಉಚಿತ ಪರೀಕ್ಷೆ ಚಿಕಿತ್ಸೆಗಾಗಿ ಹತ್ತಿರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಸಲಹೆ ಚಿಕಿತ್ಸೆ ಸೌಲಭ್ಯ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದರು. ಆರೋಗ್ಯ ನಿರೀಕ್ಷಣಾಧಿಕಾರಿ ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಆರೋಗ್ಯ ಮಾಹಿತಿ ಸಂಗ್ರಹಿಸಿ ಆರೋಗ್ಯ ಶಿಕ್ಷಣ ನೀಡಿದರು. ಆರೋಗ್ಯ ಅರಿವು ಆಂದೋಲನಾ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಯುವಕರು ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.