ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಸಾಮರಸ್ಯ ವತಿಯಿಂದ – ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

ಆಲಮೇಲ ಅ.07

ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಸಾಮರಸ್ಯ ವತಿಯಿಂದ ಆಲಮೇಲ ಪಟ್ಟಣದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತೋತ್ಸವ ಶ್ರೀರಾಮ ಮಂದಿರದಲ್ಲಿ ಜರುಗಿತು. ಸಾಮಾಜಿಕ ಸಾಮರಸ್ಯದ ಉತ್ತರ ಪ್ರಾಂತದ ಪ್ರಮುಖರಾದ ಶ್ರೀಮಂತ ದುದ್ದಗಿ ಮಾತನಾಡಿ ಮಹಾಕಾವ್ಯ ರಾಮಾಯಣ ರಚಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಯವರಿಗೆ ಸಲ್ಲುತ್ತದೆ. ಗುರು ನಾರದವರ ಆಶೀರ್ವಾದದಿಂದ ಡಕಾಯಿತ ಹೋಗಿ ಶ್ರೀ ರಾಮನ ಭಕ್ತನಾದ ಶ್ರೀ ರಾಮನ ಜಪ ಮಾಡುತ್ತಾ ಮಾಡುತ್ತಾ ಅವರ ಸುತ್ತಲೂ ಹುತ್ತು ಬೆಳೆಯಿತು ಶ್ರೀ ವಾಲ್ಮೀಕಿ ಹುತ್ತದಿಂದ ಹೊರಗೆ ಬಂದರು ಮಹಾನ್ ಋಷಿಗಳು ಕೂಡ ಆದರೂ. ಪ್ರತಿಯೊಬ್ಬ ವ್ಯಕ್ತಿಗಳು. ಸಮಾಜದಲ್ಲಿ ಬದಲಾವಣೆ ಆಗುತ್ತಾ ನಾವು ಕೂಡ ಆದರ್ಶ ವ್ಯಕ್ತಿಗಳಾಗಬೇಕೆಂದು. ಶ್ರೀ ಮಂತ ದುದ್ದಗಿ ಹೇಳಿದರು.ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕ್ ಅಧ್ಯಕ್ಷರಾದ ರಾಜೇಂದ್ರ ರಾಥೋಡ್ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಅನಂತ್ ಗೋಳ ಉಪಾಧ್ಯಕ್ಷರಾದ ಹೊನ್ನಪ್ಪ ಗುರುಕಾರ್. ಮಲ್ಲಿಕಾರ್ಜುನ್ ರಾಂಪುರಮಠ. ಪಿ.ಟಿ ಪಾಟೀಲ್ ಸದಾಶಿವ ಜಾನ. ಡಾಕ್ಟರ್ ಮಂಜು ಶಿಂದೆ. ಪಂಡಿತ್ ಆಸಂಗಿಹಾಳ. ರಾಮದಾಸ್.ಖಂದಾರೆ ಹಾಗೂ ಹಿರಿಯರು ಕಾರ್ಯಕರ್ತರು ಉಪಸ್ಥಿರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ. ಜಿ. ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button