ಮೈಲಾರಲಿಂಗೇಶ್ವರ ಸ್ವಾಮಿ ಭವಿಷ್ಯವಾಣಿ – ತುಂಬಿದ ಕೊಡ ತುಳುಕಿತಲೇ ಪರಾಕ್.
ಹೂವಿನ ಹಡಗಲಿ ಫೆ.15

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ‘ತುಂಬಿದ ಕೊಡ ತುಳುಕಿತಲೇ ಪರಾಕ್’ ಇದು ನಾಡಿನ ಸುಪ್ರಸಿದ್ದ ಮೈಲಾರಲಿಂಗೇಶ್ವರ ಜಾತ್ರೆಯ 124 ನೇ. ವರ್ಷದ ಕಾರ್ಣಿಕೋತ್ಸವದ ನುಡಿ. ಮೈಲಾರಲಿಂಗೇಶ್ವರ ಸ್ವಾಮಿಯ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ಲಕ್ಷಾಂತರ ಭಕ್ತರ ಮಧ್ಯೆ ತುಪ್ಪ ಸವರಿದ 20 ಅಡಿ ಉದ್ದದ ಐತಿಹಾಸಿಕ ಬಿಲ್ಲ ನ್ನೇರಿದ ಗೊರವಯ್ಯ ಕಾರ್ಣಿಕದ ರಾಮಣ್ಣ ದಶ ದಿಕ್ಕುಗಳತ್ತ ನೋಡುತ್ತಾ ಸದ್ದಲೇ ಎಂದು ಕೂಗಿದ ಕೂಡಲೇ ನೆರೆದಿದ್ದ ಭಕ್ತ ಗಣ ಕ್ಷಣ ಹೊತ್ತು ಮೌನ ವಹಿಸಿತು. ಆಗ ಗೊರವಯ್ಯ ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ನಾಡಿನ ಭವಿಷ್ಯ ನುಡಿದರು. ಕಾರ್ಣಿಕೋತ್ಸವ ಮುಗಿದ ಕೂಡಲೇ ಭಕ್ತರು ಕಾರ್ಣಿಕ ನುಡಿಯ ನಾನಾ ಗೂಡಾರ್ಥವನ್ನು ತಮ್ಮೊಳಗೆ ಚರ್ಚಿಸುವುದು ಎಲ್ಲೆಡೆ ಕಂಡು ಬಂತು. ಈ ಭವಿಷ್ಯ ನುಡಿಯು ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಾಗಿ ಅನ್ವಯವಾಗುತ್ತಿದೆ ಎಂಬುದು ಭಕ್ತರ ನಂಬಿಕೆಯಾಗಿದೆ ಮೈಲಾರ ಲಿಂಗೇಶ್ವರ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತಾನೆ ಎನ್ನುವ ನಂಬಿಕೆಯಿಂದ ಮರಡಿ ಸ್ಥಳದಲ್ಲಿ ಕಾಣಿಕೆ ಸಂದರ್ಭದಲ್ಲಿ ಕಲ್ಲುಗಳಿಂದ ಮರಳು ಕಟ್ಟಿಗೆ ಬೇಡಿಕೆ ಈಡೇರಲಿ ಎಂದು ತೊಟ್ಟಿಲು ಮನೆ ಅವರ ಹೆಚ್ಚಾದ ಸಿದ್ಧಿ ಆಗುತ್ತದೆ ಎಂಬುವ ಭರವಸೆಯನ್ನು ನೇಗಿಸು ಆನಂದ ಕಾರ್ಮಿಕ ಭವಿಷ್ಯ ನಿಜವಾಗಲಿದೆ ನಿಜವಾಗುತ್ತಿದೆ ಭಕ್ತರ ನಂಬಿಕೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ