“ಮನುಜ ಮತ ವಿಶ್ವ ಪಥ ಸರ್ವ ಹಿತ ಜಗದ ತತ್ವ”…..

ಜನರ ಮಧ್ಯದಲಿ ಮೂಕನಾಗಿರು
ಜಾಣರ ಕೂಟದಲಿ ಮೂಗನಾಗಿರು
ಪಂಡಿತರ ಜ್ಞಾನ ಕಡೆಗಣಿಸದಿರು
ಶುಭ ಮಂಗಳ ಉತ್ಸಾಹದಲಿ
ತಪ್ಪು ಹುಡಕದಿರು
ಹೆತ್ತವರ ಹಿರಿಯ ಒಡನಾಟದಲಿ
ಶುದ್ಧಜಲದಂತಿರು
ಕಾಯಕ ನಿರತ ಶ್ರಮಜೀವಿಗಳ
ಜೋತೆ ಖುಷಿಯ ಭಾವದಲ್ಲಿರು
ನಿಷ್ಕಲ್ಮಶ ನಿಶ್ವಾರ್ಥಿಗಳ
ಸ್ನೇಹದಲಿ ಸುಮ್ಮನಿರು
ನಿತ್ಯ ಕಾಯಕ ಜೀವಗಳ
ಜೋತೆ ಸಹಕಾರಿಯಾಗಿರು
ಯೋಗಿಗಳ ಸಂಗದಲಿ
ಆಧ್ಯಾತ್ಮಿಕತೆಯ
ಒಲುಮೆ ಉಳ್ಳವನಾಗಿರು
ಸ್ತ್ರೀ ಶಕ್ತಿ ಮಹಾಮಾತೆಯರ
ಸಾನಿಧ್ಯದಲಿ ಪೂಜ್ಯತೆಯ
ಭಾವದಲ್ಲಿರು
ದೇವರ ಸನ್ನಿಧಿಯಲಿ ನಂಬಿಕೆ
ವಿಶ್ವಾಸದ ಶ್ವಾಸವಾಗಿರು
ಹಾಂಗಿರಿಬೇಕು ಹಿಂಗಿರಬೇಕು
ಎಂದು ಹ್ಯಾಂಗ್ಯಾಂಗೋ ಇರಬೇಡ
ಸುಜ್ಞಾನಿಗೆ ಸಮಾಧಾನವೇ ಪ್ರಧಾನವು
ಮನುಜ ಮತ ವಿಶ್ವ ಪಥ ಸರ್ವ ಹಿತ ಜಗದ
ತತ್ವ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.