ಭಾರತ ಸರ್ಕಾರದ ಮಾನ್ಯತ ಪಡೆದ ಇಂಟರ್ ನ್ಯಾಷನಲ್ ಹ್ಯುಮನ್ ಡೇವಲೆಪ್ಪಮೆಂಟ ಕೌನ್ಸಿಲ ಪಣಜಿಯಲ್ಲಿ ಇಂಟರ್ ನ್ಯಾಷನಲ್ – ಗ್ಲೋಬಲ್ ಆಯಕಾನ್ ಅಜೀವರ ಅವಾರ್ಡ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬೆಳಗಾವಿ ಫೆ.19

ಬೆಳಗಾವಿಯ ಶ್ರೀ ನಗರ ರಹವಾಸಿಯಾದ ಡಾ, ಗಜಾನನ.ಎ ಕಾಂಬಳೆ ಇವರು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣ ಮಾಡಿದಕ್ಕೆ ಹಾಗೂ ಆಡಳಿತ ಕ್ಷೇತ್ರ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಡಾ, ಗಜಾನನ.ಎ ಕಾಂಬಳೆ ಇವರಿಗೆ ಭಾರತ ಸರ್ಕಾರ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯುಮನ್ ಡೇವಲೆಪ್ಪಮೆಂಟ ಕೌನ್ಸಿಲ ಇವರು ನೀಡುವ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ನೀಡಿ ಗೌರವಿಸಿದರು.

ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ಡಾ, ಪ್ರತಾಫ ಸಿಂಗ್ ತಿವಾರಿ, ಡಾ, ಸಿದ್ದಗಂಗಮ, ಶ್ರೀ. ಸಿದ್ದನ್ನಾ ಮೇಟಿ, ಡಾ, ಕೆ. ಶವರಾಮಯ್ಯ, ಡಾ, ಬಿ.ವಿ ಪದ್ಮಾವತಿ, ಡಾ, ಶಶಿಕಲಾ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ ಚಿಂಚನಸೂರ ಇವರೆಲ್ಲ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪಡೆದಿದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು ಸಂಘ ಸಂಸ್ಥೆ ಪೌಂಡೇಶನ ಪದಾಧಿಕಾರಿಗಳಿಂದ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಹಾಗೂ ಹಿತೈಷಿಗಳು ಶುಭ ಕೋರುತ್ತಿದ್ದಾರೆ.ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮಹಾನಗರ ಪಾಲಿಕೆ ಬೆಳಗಾವಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button