“ರನ್ನ ಕನ್ನಡದ ಚಿನ್ನದಂತ ಕವಿ”…..

ಚಕ್ರವರ್ತಿ ರನ್ನ ರಥ ಜನಮನ

ಸೆಳೆತ ವೈಭವದ ಸುಸ್ವಾಗತಂ

ಕರುನಾಡ ಕನ್ನಡ ಸಿರಿ ಪ್ರಾರಂಭಿಕ

ಸಾಹಿತ್ಯಲೋಕದ ಶ್ರೇಷ್ಠ ಕವಿ

ಚಕ್ರವರ್ತಿ ರನ್ನವೖಭವ ರಥ

ಹಳೇಗನ್ನಡದ ಪ್ರಧಾನ ಕವಿ ರನ್ನ

ಕರುನಾಡ ಘನತೆಯ ಪ್ರತೀಕ

ಬಾಗಲಕೋಟ ಭಾಗ್ಯದ ಬೆಳಗಲಿ

ಯಜಿನವಲ್ಲಭ ಅಬ್ಬಿಲಬ್ಬೆ ಪುಣ್ಯ ಗರ್ಭದಿ

ಜನಸಿದ ಕವಿತಿಲಕ ರನ್ನ

ಕನ್ನಡ ನಾಡ ನುಡಿ ಹೊನ್ನಸಿರಿ

ಕಿರೀಟ ಪ್ರಾಯ ಕವಿ ರಾಜಶೇಖರ

ರಾಜ ಮಹಾರಾಜ ಸತ್ಯಾಶ್ರಯ

ಆಸ್ಥಾನದ ಕವಿ ಶ್ರೇಷ್ಠ

ಐತಿಹಾಸಿಕ ಕವಿರತ್ನ ರನ್ನ ಗುರು

ಸೇನಾಚಾರ್ಯ ಮೆಚ್ಚಿನ ಶಿಷ್ಯ ರತ್ನ

ವೀರತ್ವ ಬರಹದ ಕವಿ ಹೃದಯ

“ಗದಾಯುದ್ಧ” “ಅಜಿತ ಪುರಾಣ”

ರನ್ನ ಮಹಾಕವಿ ಭವ್ಯ ಕೃತಿಗಳು

ಹಳೇಗನ್ನಡ ಸಾಹಿತ್ಯ ಲೋಕದ

ಅಭಿನಯ ಕವಿ ರನ್ನ ರತ್ನ

ಅನವರತ ಉಭಯಕವಿ ರನ್ನ ಬೆಳಗಿದ

ಬೆಳಗಲಿ ಸದಾ ಜನಮಾನಸದಲಿ

ಕರುನಾಡ ಸಾಹಿತ್ಯ ಕವಿ ಬರಹಗಾರರ

ಲೇಖನಿಗೆ ಸೂರ್ಯ ರಶ್ಮಿ

ಅಪರಂಜಿ ಕಿರಣಗಳ ಹೊಳಪು

ಕವಿರಾಜ ರನ್ನ ಹೊನ್ನನುಡಿ ಸಾಹಿತ್ಯ

ಲೋಕದ ಕರುನಾಡ ಹೆಮ್ಮೆ

ರನ್ನ ವೈಭವ ರಥ ಯಾತ್ರೆ

ರನ್ನ ಕನ್ನಡದ ಚಿನ್ನದಂತ ಕವಿ

ಕರುನಾಡ ಭುವನೇಶ್ವರಿಯ ಮಡಿಲಲಿ

ರನ್ನ ಕಂಪು ಪಸರಿಸಲಿ

ಶ್ರೀದೇಶಂಸು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ಆರೋಗ್ಯ ನಿರೀಕ್ಷಣಾಧಿಕಾರಿ

ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button