ಫೆ, 22 ರಂದು ನಡೆಯಲಿರುವ ಶ್ರೀ ಗುರುಬಸವೇಶ್ವರ ಜಾತ್ರೆಗೆ – ಪಟ್ಟಣ ಪಂಚಾಯಿತಿ ವತಿಯಿಂದ ಸಕಲ ಸಿದ್ಧತೆ.
ಕೊಟ್ಟೂರು ಫೆ .21

ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಬದ್ದಿ ರೇಖಾ ರಮೇಶ್ ಮತ್ತು ನಸುರುಲ್ಲಾ ಮುಖ್ಯ ಅಧಿಕಾರಿಗಳು ಶ್ರೀ ಗುರುಬಸವೇಶ್ವರ ಮಹಾ ರಥೋತ್ಸವಕ್ಕೆ ಹಾಗೂ ಜಾತ್ರೆಯ ಪ್ರಯುಕ್ತ ಪಟ್ಟಣ ಪಂಚಾಯಿತಿ ವತಿಯಿಂದ ಭಕ್ತಾದಿಗಳಿಗೆ ತಾತ್ಕಾಲಿಕ ಶೌಚಾಲಯ ಮತ್ತು ಸ್ನಾನ ಗೃಹಗಳನ್ನು ವ್ಯವಸ್ಥೆ ಮಾಡಲಾಗಿದ್ದು ಇದನ್ನು ಸದುಪಯೋಗ ಪಡಿಸಿ ಕೊಂಡು ಸ್ವಚ್ಛತೆಯನ್ನು ಕಾಪಾಡಲು ಕೋರಿ ಸಾರ್ವಜನಿಕರಿಗೆ ತಿಳಿಸಿದರು. ಶ್ರೀ ಗುರು ಬಸವೇಶ್ವರ ಜಾತ್ರೆ ಪ್ರಯುಕ್ತ ಮಾನ್ಯ ಜಿಲ್ಲಾಧಿಕಾರಿಗಳು ಸೂಚಿಸಿರುವಂತೆ ಮುಖ್ಯ ಅಧಿಕಾರಿಗಳು ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು ಮತ್ತು ಎಲ್ಲಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಪಟ್ಟಣದ ಎಲ್ಲಾ ವಾರ್ಡಗಳಲ್ಲಿ ಚರಂಡಿ ಸ್ವಚ್ಚತೆ, ರಸ್ತೆಗಳ ಸ್ವಚ್ಚತೆ ಮತ್ತು ವಾಹನಗಳ ನಿಲುಗಡೆಗೆ ತಾತ್ಕಾಲಿಕ ಪಾರ್ಕಿಂಗ್.
ಹಾರಳು ಪಂಪ್ ಹೌಸ್ ಮತ್ತು ಹರಪನಹಳ್ಳಿ ರಸ್ತೆಯಲ್ಲಿ ಪಾದ ಯಾತ್ರಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಶೌಚಾಲಯ ಮತ್ತು ಸ್ನಾನ ಗೃಹಗಳ ವ್ಯವಸ್ಥೆ, ಎಲ್ಲಾ ವಾರ್ಡಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡನೆ, ಎಲ್ಲಾ ವಾರ್ಡಗಳಲ್ಲಿ ಫಾಗಿಂಗ್ ವ್ಯವಸ್ಥೆ, ರಥೋತ್ಸವ ಜರುಗುವ ತೇರು ಬಯಲು ಪ್ರದೇಶದಲ್ಲಿ ಕ್ರಷರ್ ಪೌಡರ್ ಹಾಕಿಸಲಾಗಿದೆ. ಬೀದಿ ದೀಪ ದುರಸ್ಥಿ ಮತ್ತು ಅಳವಡಿಸುವುದು ಮತ್ತು ಎಲ್ಲಾ ವಾರ್ಡಗಳಲ್ಲಿನ ಮಿನಿ ಸಿಸ್ಟರ್ನ್ ಗಳನ್ನು ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚ ಗೊಳಿಸಲಾಗಿದೆ ಮತ್ತು ನೀರಿನ ಪೈಪ್ ಲೈನ್ ದುರಸ್ತಿ ಗೊಳಿಸಲಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು