ಮಾನ್ವಿಯಲ್ಲಿ ಮಡಿವಾಳ ಮಾಚಿದೇವರ – ಮೂರ್ತಿ ಅನಾವರಣ.
ಮಾನ್ವಿ ಫೆ.22

ಮಡಿವಾಳ ಸಮಾಜದವರು ಹಿಂದುಳಿಯ ಬಾರದು ಯಾಕಂದರೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಮುಂದುವರಿಯಲು ಸಾಧ್ಯ ಎಂದು ಶಾಸಕ ಹಂಪಯ್ಯ ನಾಯಕ ಪುತ್ರ ವಕೀಲ ಶಿವರಾಜನಾಯಕ ತಿಳಿ ಹೇಳಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಮೂರ್ತಿ ಅನಾವರಣ ಗೊಳಿಸಿ ಮಾತನಾಡಿ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮೂಲಕ ಸರಕಾರ ನಾನಾ ಸೌಲಭ್ಯ ಕಲ್ಪಿಸಿದ್ದು, ಹೀಗಾಗಿ ಸಮಾಜದವರು ಮುಂದೆ ಬಂದು ಸೌಲಭ್ಯ ಪಡೆಯ ಬೇಕೆಂದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮಾನ್ವಿಯಲ್ಲಿ ಮಡಿವಾಳ ಸಮಾಜದವರು ತೀರ ಹಿಂದುಳಿದವರಾಗಿದ್ದು, ಸಮಾಜದ ಪರವಾಗಿ ನಾನು ಬೆನ್ನೆಲುಬಾಗಿ ನಿಂತಿರುತ್ತೇನೆ ಎಂದರು.
ನಾನು ಈ ಹಿಂದೆ ಶಾಸಕನಾದ ಸಂಧರ್ಭದಲ್ಲಿ ಸಮಾಜದವರಿಗಾಗಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡುವ ಕೆಲಸ ಮಾಡಿದ್ದೇನೆ. ಅದೆ ರೀತಿಯಲ್ಲಿ ನಿಮ್ಮ ಸಮಾಜದವ ರೊಂದಿಗೆ ಕೆಲಸ ಮಾಡಲು ಬದ್ಧ ನಾಗಿರುತ್ತೇನೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ