ಶೀ ಗುರು ಕೊಟ್ಟೂರೇಶ್ವರ ಮಹಾ ರಥೋತ್ಸವ ಸಕಲ ವಾದ್ಯಗಳೊಂದಿಗೆ – ವಿಜ್ರಂಭಣೆ ಯಿಂದ ಜರುಗಿತು.
ಕೊಟ್ಟೂರು ಫೆ .22

ಕರ್ನಾಟಕದಲ್ಲಿ ಐತಿಹಾಸಿಕ ಕ್ಷೇತ್ರವಾದ ಶ್ರೀ ಗುರು ಕೊಟ್ಟೂರೇಶ್ವರ ಮಹಾ ರಥೋತ್ಸವ ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ 5:50 ಕ್ಕೆ ಮೂಲ ನಕ್ಷತ್ರದಲ್ಲಿ ನೆರವೇರಿತು. ಇಲ್ಲಿ ವಿಶೇಷವಾಗಿ ದಾವಣಗೆರೆ ಚಿತ್ರದುರ್ಗ ಗದಗ ಮುಂಡರಗಿ ಹಡಗಲಿ ಬಳ್ಳಾರಿ ಕೊಪ್ಪಳ ಇನ್ನೂ ಮುಂತಾದ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಮುಸ್ಲಿಂ ಬಾಂಧವರು ಸೇರಿ ಜಾತ್ಯಾತೀತತೆ ಜಾತ್ರೆ ಶ್ರೀ ಗುರು ಕೊಟ್ಟೂರೇಶ್ವರ ಮಹಾರಥೋತ್ಸವವು ಹರಿಜನ ಕೆರೆಯ ಮಹಿಳೆ ಬೆಳಗುವ ಗಿಣ್ಣದ ನೈವೇದ್ಯ ಹಾಗೂ ಕಳಸದಾರತಿ ಬೆಳಗಿದ ನಂತರವೇ ತೇರು ನೆರವೇರುವುದು. ಈ ಸ್ವಾಮಿಯ ಪವಾಡ ಪುರುಷನೆಂದು ಹೆಸರಾದ ಶ್ರೀ ಗುರು ಕೊಟ್ಟೂರೇಶ್ವರ ಸರ್ವ ಭಕ್ತರಿಗೆ ಬೇಡಿದ್ದನ್ನಲ್ಲ ನೀಡುತ್ತಾನೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು