ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಊಟದ – ಅವ್ಯವಸ್ಥೆ ಸರಿ ಪಡಿಸಲಿಕ್ಕೆ ಕುಲ ಪತಿಗಳಿಗೆ ಒತ್ತಾಯಿಸಿ ಮನವಿ.

ಬಳ್ಳಾರಿ ಮಾ.05

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ವಸತಿ ನಿಲಯದ ವಿದ್ಯಾರ್ಥಿನಿಯರು ವಸತಿ ನಿಲಯದ ಅಧಿಕಾರಿಗಳು ವಿದ್ಯಾರ್ಥಿನಿಯಾರಿಗೆ ಕಳಪೆ ಮಟ್ಟದ ಊಟ ಉಪ ಆಹಾರ ನೀಡುತ್ತಿದ್ದು ಹಾಗೂ ಊಟ ಉಪ ಆಹಾರ ಚಾರ್ಟ್ ಲಿಸ್ಟ್ ನ ಪ್ರಕಾರ ಊಟ ಉಪಹಾರವನ್ನು ನೀಡಲಾರದೆ. ಇದ್ದು ವಿದ್ಯಾರ್ಥಿನಿಯರ ಗೋಳು ಕೇಳ ಲಾರದಂತಾಗಿ ಬಿಟ್ಟಿದ್ದರಿಂದ ಊಟದ ವಿಷಯ ತಮಗೆ ಮನ ಬಂದಂತೆ ಕಳಪೆ ಮತ್ತು ಸಮಯಕ್ಕೆ ಸರಿಯಾಗಿ ಊಟವನ್ನು ನೀಡಲಾರದೆ ಅಧಿಕಾರಿಗಳ ಕೆಟ್ಟ ವರ್ತನೆ ಯಾಗಿದ್ದರಿಂದ ವಿದ್ಯಾರ್ಥಿನಿಯರು ಊಟಕ್ಕಾಗಿ ಪರಿ ದಾಡುತ್ತಿದ್ದು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿ ಪಡಿಸಲಿಕ್ಕಾಗಿ ಮೌಖಿಕವಾಗಿ ವಿದ್ಯಾರ್ಥಿನಿಯರು ಮನವಿ ಮಾಡಿ ಕೊಂಡರು ಸಹ ಯಾವುದೇ ಪ್ರಯೋಜನ ವಾಗಲಾರದೆ ಇದ್ದು. ವಿದ್ಯಾರ್ಥಿನಿಯರು ಒಂದೊಂದು ಸಾರಿ ಊಟವೇ ನೀಡಲಾರದೆ ಇದ್ದು. ಈ ಮಟ್ಟಕ್ಕೆ ಬಂದಿದೆ ನಿಲಯದ ಅಧಿಕಾರಿಗಳು ಉದಾಸೀನ ವರ್ತನೆ ಮಾಡುತ್ತಿದ್ದು. ವಿಶ್ವವಿದ್ಯಾಲಯದಲ್ಲಿ ಹಾಸ್ಟೇಲ್ ವಿದ್ಯಾರ್ಥಿನಿಯರ ಬಗ್ಗೆ ಯಾವೊಬ್ಬ ಅಧಿಕಾರಿಗಳು ಸರಿಯಾಗಿ ಊಟ ಉಪಹಾರ ನೀಡಲಿಕ್ಕೆ ಕ್ರಮ ಕೈಗೊಳ್ಳಲಾರದೆ ಇದ್ದರಿಂದ ಮೂರು ನಾಲ್ಕು ತಿಂಗಳಿ ಗೊಮ್ಮೆ ವಿದ್ಯಾರ್ಥಿನಿಯರ ಗೋಳು ನಿರಂತರವಾಗಿ ಬಿಟ್ಟಿದ್ದರಿಂದ ಕೂಡಲೇ ತಾವುಗಳು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಶಿಸ್ತಿನ ಕ್ರಮ ಜರುಗಿಸಿ ವಿದ್ಯಾರ್ಥಿನಿಯರಿಗೆ ಗುಣ ಮಟ್ಟದ ಊಟ ಉಪ ಆಹಾರವನ್ನು ನೀಡಲಿಕ್ಕೆ ಹಾಗೂ ಸರಿಯಾದ ಸಮಯಕ್ಕೆ ಊಟ ಉಪ ಆಹಾರವನ್ನು ನೀಡಲಿಕ್ಕೆ ಸಂಬಂಧ ಪಟ್ಟಂತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಮತ್ತು ಆದೇಶ ನೀಡಿ ಇದೇ ರೀತಿಯಾಗಿ ನೀಡಲಾರದೆ ಇದ್ದ ಪಕ್ಷದಲ್ಲಿ ನಿಮ್ಮ ವಿಶ್ವವಿದ್ಯಾಲಯದ ಕುಲ ಸಚಿವರ ಕಾರ್ಯಾಲಯದ ಮುಂದಿ ಧರಣಿ ಸತ್ಯಾಗ್ರಹವನ್ನು ಹಮ್ಮಿ ಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತೀರುವ ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರು ಮಾಧ್ಯಮ ಮೂಲಕ ಎಚ್ಚರಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button