ರಾಜ್ಯ ಮಟ್ಟದ ಎ.ವೈ ಅಕ್ಕರಕಿ ಪರಿಸರ ರತ್ನ 2025 ಪ್ರಶಸ್ತಿ ಸ್ವೀಕರಿಸಿದ – ವನಸಿರಿ ಅಮರೇಗೌಡ ಮಲ್ಲಾಪುರ.

ದೇವದುರ್ಗ ಫೆ.25

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಶ್ರೀ ಮುರಿಗೆಪ್ಪ ಖೇಣದ್ ಕಲ್ಯಾಣ ಮಂಟಪದಲ್ಲಿ ಅಕ್ಕರಕಿ ರಂಗಮ್ಮ ರಂಗಪ್ಪ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆದ ಟ್ರಸ್ಟ್ ಉದ್ಘಾಟನೆ ಮತ್ತು ಪರೀಕ್ಷೆ ಎದುರಿಸುವ ಕುರಿತು ಉಪನ್ಯಾಸ ಹಾಗೂ ಪರೀಕ್ಷಾ ಪ್ಯಾಡ್ ಮತ್ತು ಪೆನ್ನು ವಿತರಣಾ ಸಮಾರಂಭದಲ್ಲಿ ಸಿಂಧನೂರಿನ ವನಸಿರಿ ಪೌಂಡೇಷನ್ ಸಂಸ್ಥಾಪಕ, ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರ ಪರಿಸರ ಕ್ಷೇತ್ರದಲ್ಲಿ ಸಾಧನೆಗೈದ ಸೇವೆ ಗುರುತಿಸಿ ರಾಜ್ಯ ಮಟ್ಟದ ಎ.ವೈ ಅಕ್ಕರಕಿ ಪರಿಸರ ರತ್ನ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಜಹೀರು ಪಾಷಾ ತಾತನವರು,ಉದ್ಘಾಟಕರು ಭಾನು ಪ್ರಕಾಶ ಖೇಣದ್, ಅಧ್ಯಕ್ಷತೆಯನ್ನು ಅಕ್ಕರಕಿ ರಂಗಮ್ಮ ರಂಗಪ್ಪ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶಿವುಕುಮಾರ ಅಕ್ಕರಕಿ, ಗೌರವ ಉಪಸ್ಥಿತಿ ಶ್ರೀಮತಿ ಪೋಲಮ್ಮ ಯಲ್ಲಪ್ಪ ಅಕ್ಕರಕಿ, ಕಾರ್ಯದರ್ಶಿ ಬಸವರಾಜ ಅಕ್ಕರಕಿ, ವನಸಿರಿ ಪೌಂಡೇಷನ್ ದೇವದುರ್ಗ ತಾಲೂಕ ಅಧ್ಯಕ್ಷ ಪ್ರಕಾಶ ಪಾಟೀಲ್ ಶಾವಂತಗೇರಿ, ರಾಜ್ಯ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ.ಹೊಸಹಳ್ಳಿ, ಸುನಿಲ್ ಜಾಡಲದಿನ್ನಿ ಹಾಗೂ ಪಟ್ಟಣದ ವಿವಿಧ ಶಾಲಾ ಕಾಲೇಜುಗಳ SSLC & PUC ವಿದ್ಯಾರ್ಥಿಗಳು ಇದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button