ಮಹಿಳೆಯರು ಸಬಲರಾದಾಗ, ನಮ್ಮ ಸಮಾಜ ಸಬಲವಾಗುತ್ತದೆ – ಶಶಿಕಲಾ ಪಾಟೀಲ.
ರೋಣ ಮಾ.18

ನಗರದ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನಡೆಯಿತು ಪ್ರಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಸ್ಥಾನ ವಹಿಸಿದ ಅಶ್ವಿನಿ ದೊಡ್ಡಲಿಂಗಪ್ಪ ನವರು ಮಹಿಳೆಯರ ಪಾತ್ರ’ ಎಂಬುದು ಮಹಿಳೆಯರಿಗೆ ನಿಯೋಜಿಸಲಾದ ಸಾಮಾಜಿಕ ನಿರೀಕ್ಷೆಗಳು ಮತ್ತು ಜವಾಬ್ದಾರಿಗಳನ್ನು ಸೂಚಿಸುತ್ತದೆ, ಉದಾಹರಣೆಗೆ ಅಧಿಕಾರದ ಸ್ಥಾನಗಳಲ್ಲಿ ಪುರುಷರನ್ನು ಬೆಂಬಲಿಸುವುದು, ಕುಟುಂಬವನ್ನು ನೋಡಿ ಕೊಳ್ಳುವುದು ಮತ್ತು ಸಾಂಪ್ರದಾಯಿಕ ಲಿಂಗ ರೂಢಿಗಳಿಂದ ವ್ಯಾಖ್ಯಾನಿಸಲಾದ ಶ್ರೇಣೀಕೃತ ರಚನೆಯೊಳಗೆ ಪರಹಿತ ಚಿಂತನೆ ಮತ್ತು ಸ್ವಯಂ ತ್ಯಾಗವನ್ನು ಸಾಕಾರ ಗೊಳಿಸುವುದು ಎಂದು ಮಾತನಾಡಿದರು. ನಂತರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಕದಳಿ ಹಾಗೂ ಸ್ಪಂದನಾ ಮಹಿಳಾ ವೇದಿಕೆಯ ತಾಲೂಕಾಧ್ಯಕ್ಷೆ ಶಶಿಕಲಾ ಪಾಟೀಲ ಕಾರ್ಯಕ್ರಮ ಉದ್ದೇಸಿಸಿ ನಮ್ಮ ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳ ಮಹತ್ವದ್ದು. ಅವರು ತಾಯಿ, ಸಹೋದರಿ, ಪತ್ನಿ, ಮಗಳು ಹೀಗೇ ವಿವಿಧ ರೂಪಗಳಲ್ಲಿ ನಮ್ಮ ಜೀವನವನ್ನು ಬೆಳಗುತ್ತಾರೆ. ಶಿಕ್ಷಣ, ವಿಜ್ಞಾನ, ಕಲೆ, ರಾಜಕೀಯ, ಕ್ರೀಡೆ ಹೀಗೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸಿದ್ದಾರೆ. ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಬದ್ಧವಾಗಿದೆ. ಮಹಿಳೆಯರ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾತಂತ್ರ್ಯ ಮತ್ತು ಭದ್ರತೆಗೆ ನಾವು ವಿಶೇಷ ಗಮನ ನೀಡುತ್ತಿದ್ದೇವೆ ಎಂದರು.ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಹೆಚ್ಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಸಂಸತ್ತಿನವರೆಗೆ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದೇವೆ. ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ, ಸಮಾಜದ ಅಭಿವೃದ್ಧಿ ಇನ್ನಷ್ಟು ವೇಗ ಗೊಳ್ಳುತ್ತದೆ. ಮಹಿಳೆಯರು ಸಬಲರಾದಾಗ, ನಮ್ಮ ಸಮಾಜ ಸಬಲವಾಗುತ್ತದೆ. ಇದರಿಂದ ನಮ್ಮ ರಾಜ್ಯ ಹಾಗೂ ದೇಶ ಅಭಿವೃದ್ಧಿ ಗೊಳ್ಳುತ್ತದೆ ಎಂದು ಮಾತನಾಡಿದರು. ಈ ಬಾರಿಯ ಮಹಿಳಾ ದಿನಾಚರಣೆಯನ್ನು ಹೊಸ ರೀತಿಯಲ್ಲಿ ಆಚರಣೆ ಮಾಡಲಾಯಿತು. ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರು ತಯಾರಿಸಿದ ತಿನಿಸುಗಳು ಸೇರಿ ವಿವಿಧ ರೀತಿಯ ಕಲಾಕೃತಿಕ ವಸ್ತುಗಳ ಪ್ರಚಾರ ಕಾರ್ಯ ಕೂಡ ನಡೆಸಿದರು.ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಮಂಜುಳಾ ರೇವಡಿ, ನಾಜಬೇಗಂ ಯಲಿಗಾರ, ಗೀತಾ ಯಾಳಗಿ, ಅನಸಮ್ಮ ವಾಲ್ಮೀಕಿ, ಜ್ಯೋತಿ ರೆಡ್ಡೆರ, ರಮಜಮ್ಮ ಮುಗುಳಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ