ಸ್ವಚ್ಛತೆಯ ಬಗ್ಗೆ ವರದಿ ಮಾಡಿದರು ಎಚ್ಚೆತ್ತು ಕೊಳ್ಳದ – ಭೂ ವಿಭಾಗದ ಅಧಿಕಾರಿಗಳು.
ರೋಣ ಮಾ.18

ಈ ನಾಮಫಲಕ ಯಾವ ಪುರುಷಾರ್ಥಕ್ಕೆ ಮಂಕು ತಿಮ್ಮ
ನಗರದ ಮಿನಿ ವಿಧಾನ ಸೌಧದಲ್ಲಿರುವ ಭೂ ವಿಭಾಗದಲ್ಲಿ ಸ್ವಚ್ಛತೆಗಾಗಿ ಗೋಡೆಯ ಮೇಲೆ ಒಂದು ನಾಮಫಲಕವನ್ನು ಹಾಕಲಾಗಿದೆ ಅದು ಏನೆಂದರೆ ಈ ಕಚೇರಿಯ ಆವರಣದಲ್ಲಿ ಗುಟ್ಕಾ ತಿಂದು ಉಗುಳುವವರಿಗೆ ಹಾಗೂ ತಿಂಡಿ ತಿಂದು ಪ್ಲಾಸ್ಟಿಕ್ ಎಸೆಯುವವರಿಗೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ನಿಯಮ ಮಾಡಿ ನಾಮಫಲಕ ಹಾಕಲಾಗಿದೆ. ಈ ವಿಷಯ ಕುರಿತು ನಮ್ಮ ಸುಶೀಲ ವಾಣಿ ಪತ್ರಿಕೆಗಳಲ್ಲಿ ವರದಿ ಬಂದರೂ ಕೂಡ ಇನ್ನೂ ಯಾವುದೇ ರೀತಿಯ ಸ್ವಚ್ಛತೆಯ ಕಾರ್ಯಭಾರಗಳು ನಡೆದೇ ಇಲ್ಲ ಅಂದರೆ ಇವರಿಗೆ ಸ್ವಚ್ಛತೆಯ ಅರಿವು ಇನ್ನೂ ಆಗೇ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸಹ ಅಲ್ಲಲ್ಲಿ ಟೀ ಕಪ್ ಗಳು ಪಾರ್ಸೆಲ್ ಕವರ್ ಗಳು ಕಂಡು ಬರುತ್ತವೆ ಅಂದರೆ ಇವರಿಗೆ ಪತ್ರಿಕೆಯಲ್ಲಿ ಬರುವ ಸುದ್ದಿಗಳು ಹಾಗೂ ಪತ್ರಕರ್ತರ ಬಗ್ಗೆ ಯಾವುದೇ ರೀತಿಯ ಹೆದರಿಕೆ ಹಾಗೂ ಅವರನ್ನ ಗಣನೆಗೆ ತೆಗೆದು ಕೊಳ್ಳುತ್ತಿಲ್ಲ ಯಾರು ಏನು ಬೇಕಾದರೂ ಮಾಡಿ ಕೊಳ್ಳಲಿ ಎಂಬ ನಿಯಮದಂತೆ ನಡೆದು ಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಹಾಗೂ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಅದು ಏನೆಂದರೆ ಭೂಮಿ ವಿಭಾಗ ಗ್ರಾಮ ಆಡಳಿತ ಅಧಿಕಾರಿಗಳು ತಾವು ಹಾಕಿದ ನಿಯಮದ ನಾಮಫಲಕದಂತೆ ನಡೆದು ಕೊಳುವುದಿಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ನಾವು ಗಮನಿಸಿರುವ ಪ್ರಕಾರ ಈ ಕಚೇರಿಯಲ್ಲಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದ ಸಾರ್ವಜನಿಕರು ತಮ್ಮ ಜಮೀನಿನ ಫಹಣಿ ಪಡೆಯಲು ಭೂಮಿ ವಿಭಾಗ ಕೊಠಡಿ ಸಂಖ್ಯೆ 11 ರ ಹಿಂದೆ ಸಾರ್ವಜನಿಕರು ಫಹಣಿ ಪಡೆಯುತ್ತಾರೆ.ಆದರೆ ಫಹಣಿ ಪಡೆಯಲು ಬರುವ ಸಾರ್ವಜನಿಕರು ಯಾರು ಗುಟ್ಕಾ ತಿಂದು ಉಗುಳುವುದಿಲ್ಲ ಹಾಗೂ ತಿಂಡಿ ತಿಂದು ಪ್ಲಾಸ್ಟಿಕ್ ಎಸೆಯುವುದಿಲ್ಲ.ಎಲ್ಲವನ್ನು ನೋಡಿದರೆ ಬೇಲಿಯೇ ಎದ್ದು ಹೊಲ ಮೇದಂತೆ ಕಾಣುತ್ತದೆ, ಈಗಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಳ್ಳಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ ಹಾಗೂ ನಮ್ಮ ಪತ್ರಿಕೆಯಲ್ಲಿ ಈಗಾಗಲೇ ಇದರ ಬಗ್ಗೆ ವರದಿ ಬಿತ್ತರಿಸಲಾಗಿತ್ತು ಆದರೂ ಕೂಡ ಯಾವುದೇ ರೀತಿಯ ಬದಲಾವಣೆಯು ಕಂಡು ಬಂದಿಲ್ಲ ಇನ್ನೂ ಮುಂದೆ ಆದರೂ ಸ್ವಚ್ಛತೆ ಕಡೆ ಗಮನ ವಹಿಸುವಿರೋ ಅಥವಾ ಆಮ್ ಆದ್ಮಿ ಪಕ್ಷದ ಸಿಂಬಲ್ ಕೈಗೆತ್ತಿವರೆಗೂ ಕಾಯುವಿರೋ ಚಾಯ್ಸ್ ಇಸ್ ಯುವರ್ಸ್.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ