ಡಾ, ಜೆ.ಎನ್ ರಾಮಕೃಷ್ಣಗೌಡರು ಶ್ರೀ ಮಠಕ್ಕೆ ಸಲ್ಲಿಸಿದ 50 ವರ್ಷಗಳ ಸಾರ್ಥಕ ಸೇವೆ – ಗುರುತಿಸಿ ನೀಡಿದ ಸಾಧಕ ರತ್ನ ಪ್ರಶಸ್ತಿ ಪ್ರಧಾನ.
ಕೆ.ಆರ್ ಪೇಟೆ ಮಾ .18

ಪಟ್ಟಣದ ರಾಯಲ್ ಕಂಫರ್ಟ್ ಹೋಟೆಲ್ ಸಭಾಂಗಣದಲ್ಲಿ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮಠದ ಭಕ್ತರು, ಮುಖಂಡರು, ವಿವಿಧ ನಾಗರೀಕ ಸಂಘಟನೆಗಳ ಪ್ರಮುಖರು ಶ್ರೀ ಆದಿ ಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ, ಜೆ.ಎನ್ ರಾಮಕೃಷ್ಣಗೌಡರು ಶ್ರೀ ಮಠಕ್ಕೆ ಸಲ್ಲಿಸಿದ 50 ವರ್ಷಗಳ ಸಾರ್ಥಕ ಸೇವೆ ಗುರುತಿಸಿ “ಸಾಧಕ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು ಶ್ರೀ ಆದಿ ಚುಂಚನಗಿರಿ ಮಠದ ಕಾರ್ಯ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ಕೀರ್ತಿ ಭೈರವೈಕ್ಯ ಡಾ, ಬಾಲ ಗಂಗಾಧರನಾಥ ಶ್ರೀಗಳಿಗೆ ಸೇರಿದೆ. ಶ್ರೀಗಳ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿ ಶ್ರೀ ಮಠದ ಯಶಸ್ಸಿಗೆ ತೆರೆಯ ಹಿಂದೆ ಡಾ, ಜೆ.ಎನ್ ರಾಮಕೃಷ್ಣಗೌಡ ಶ್ರಮಿಸಿದ್ದಾರೆ ಎಂದು ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್ ರವರು ಬಣ್ಣಿಸಿದರು. ನಾನು ಟೀಕೆ ಮಾಡುವವರನ್ನು ಯಾರು ತಮ್ಮ ಜೊತೆಯಲ್ಲಿಟ್ಟು ಕೊಳ್ಳುತ್ತಾರೋ ಅವರು ಮಾತ್ರ ಸಮಾಜಕ್ಕೆ ಮಾರ್ಗದರ್ಶಿಗಳಾಗಿ ಸಾಧಕರಾಗ ಬಲ್ಲರು ಎಂದು ಸಾಹಿತಿ, ಹಿರಿಯ ಚಲನ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ ನಾನು ರಾಮಕೃಷ್ಣಗೌಡರು ಸಹ ಪಾಠಿಗಳು. ಅವರು ಶಿಕ್ಷಕ ವೃತ್ತಿ ತ್ಯಜಿಸಿ ಬಾಲಗಂಗಾಧರನಾಥ ಶ್ರೀಗಳ ಸೇವಾ ಕೈಂಕರ್ಯ ಗಳಿಗೆ ಹೆಗಲು ಕೊಟ್ಟರು. ಶ್ರೀಗಳನ್ನು ಕುರಿತ ಕಾಲಾತೀತ ಕೃತಿಗೆ ನಾನು ಸಂಪಾದಕನಾದಾಗ ಕೆಲವರು ನನ್ನ ವಿರುದ್ಧ ಹೇಳಿದ್ದರು. ಆಗ ಶ್ರೀ ಗಳು ಇತರರ ಮಾತಿಗೆ ಬೆಲೆ ಕೊಡದೆ ಯಾರು ಟೀಕೆ ಮಾಡುತ್ತಾರೋ ಅವರೇ ನಿಜವಾಗಿ ನಮ್ಮ ಯಶಸ್ಸನ್ನು ಬಯಸುವವರು ಎಂದು ಹೇಳಿದ್ದರಂತೆ ಎಂದರು. ಇಂದು ಸಮಾಜ ಬದಲಾಗಿದೆ. ಸಾಧಕರನ್ನು ಮೆಚ್ಚಿ ಪ್ರೋತ್ಸಾಹಿಸುವವರ ಸಂಖ್ಯೆ ಕ್ಷೀಣಿಸಿದೆ. ಅಹಂಕಾರ ಮತ್ತು ಅಸೂಹೆ ಯಿಂದ ಸಮಾಜ ತುಂಬಿ ತುಳುಕುತ್ತಿದೆ. ಸಾಧಕರು ಕಲಾತೀತರು. ಅವರು ತಮ್ಮ ಬದುಕಿನ ಘಟ್ಟದಲ್ಲಿ ಮಾಡಿದ ಸಾಧನೆಗಳು ಕಲಾತೀತವಾಗಿ ಮಾನವ ಕುಲಕ್ಕೆ ಬೆಳಕಾಗಿ ಮುನ್ನಡೆಸುತ್ತವೆ ಎಂಬುದಕ್ಕೆ ಬಾಲಗಂಗಾಧರನಾಥ ಶ್ರೀ ಗಳು ಅತ್ಯುತ್ತಮ ನಿದರ್ಶನ ಎಂದರು.ಶ್ರೀಗಳ ಮಾನಸ ಪುತ್ರರೆಂದೇ ಬಿಂಬಿಸಲ್ಪಟ್ಟಿರುವ ರಾಮಕೃಷ್ಣಗೌಡರು ಹೇಮಗಿರಿ ಶಾಖಾ ಮಠದ ಕಾರ್ಯ ದರ್ಶಿಗಳಾಗಿ ಮಠದ ಶಿಕ್ಷಣ ಸೇವೆಗಳನ್ನು ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದ್ದಾರೆ. ಕೆ.ಆರ್ ಪೇಟೆ ಜನತೆ ನೀಡುತ್ತಿರುವ ಸಾಧಕ ರತ್ನ ಪ್ರಶಸ್ತಿ ಅವರಿಗೆ ಸಲ್ಲುತ್ತಿರುವುದು ಸಾರ್ಥಕವಾಗಿದೆ ಎಂದರು.ಬಿ.ಜಿ.ಎಸ್ ಶಿಕ್ಷಣ ಸಂಸ್ಥೆ ಮಕ್ಕಳು ರಚಿಸಿ ಹೊರ ತಂದಿರುವ ಚಿಣ್ಣರ ಶುಭಾಶಯಗಳ ಕುಂಚ ಮತ್ತು ಕನ್ನಡಿಗರಿ ಗೊಂದು ನುಡಿ-ನಮನ ಕೃತಿಗಳನ್ನು ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್ ಮತ್ತು ಹಿರಿಯ ನಟಿ ವಿನಯ ಪ್ರಸಾದ್ ಬಿಡುಗಡೆ ಮಾಡಿದರು.ಸಮಾರಂಭದಲ್ಲಿ ಶಾಸಕ ಎಚ್.ಟಿ ಮಂಜು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್ ದೇವರಾಜು, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ. ಹರೀಶ್, ಪುರಸಭಾ ಸದಸ್ಯರಾದ ಕೆ.ಬಿ ಮಹೇಶ್, ಬಸ್ ಸಂತೋಷ್, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂ ಬರೀಶ್,ಆರ್ಟಿಒ ಮಲ್ಲಿಕಾರ್ಜುನ್, ಹಾಸ್ಯ ಕಲಾವಿದರಾದ ಸುಷ್ಮಿತ. ಶಿವು. ನಾಟನಹಳ್ಳಿ ಗಂಗಾಧರ್, ಬಿ.ನಂಜಪ್ಪ, ರವಿಶಂಕರ್. ನಾಗೇಶ್ (ಚಟ್ಟಂಗೆರೆ), ಎಸ್.ಸಿ ವಿಜಯಕುಮಾರ್, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಹರಿಚರಣ್ ತಿಲಕ್. ನೀಲಕಂಠ, ಶಾಲಾ ಶಿಕ್ಷಕರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗೋವಿಂದರಾಜು.ಕೂಡಲಕುಪ್ಪೆ. ಕೆ.ಆರ್ ಪೇಟೆ