ಮಾದಿಗ ಮಹಾ ಸಭಾದಿಂದ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ – ನಾಗರಾಜ ಕರೆ.

ಕುಷ್ಟಗಿ ಮಾ.19

ನಿನ್ನೆ ಮಧ್ಯಾಹ್ನ ನಡೆದ ಕುಷ್ಟಗಿ ತಾಲೂಕಿನ ಮಾದಿಗ ಸಮುದಾಯದ ಒಳಮೀಸಲಾತಿ ಜಾರಿಗಾಗಿ ಬೆಂಗಳೂರು ಚಲೋ ಕಾರ್ಯಕ್ರಮದ ಸಭೆಯಲ್ಲಿ ಪಾಲ್ಗೊಳ್ಳವ ಮೂಲಕ ಬೆಂಗಳೂರು ಚಲೋ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಮುಕ್ತವಾಗಿ ಚರ್ಚಿಸಿ ನಂತರ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಎಲ್ಲರೂ ಒಟ್ಟಾಗಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಸದರಿ ಈ ಸಭೆಯಲ್ಲಿ ಪಾಲ್ಗೊಂಡ ಕುಷ್ಟಗಿ ತಾಲೂಕಿನ ಹಿರಿಯ ಮುಖಂಡರುಗಳು, ನಾಯಕರು, ಸಾಮಾಜಿಕ ನ್ಯಾಯದ ಪರ ಹೋರಾಟಗಾರರು, ಸಮಾಜದ ಒಳಿತಿಗಾಗಿ ಒಳಮೀಸಲಾತಿ ಜಾರಿ ಪರ ಇರುವ ಹೋರಾಟಗಾರರು ಮುಖಂಡರುಗಳು ಹಾಗೂ ಕುಷ್ಟಗಿ ತಾಲೂಕಿನ ಮಾದಿಗ ಸಮುದಾಯದ ಹಿರಿಯ ಮುಖಂಡರಾದ ಶ್ರೀ ಸುಖರಾಜ ತಾಳಕೇರಿ, ಪರಸಪ್ಪ ಮೇಗೂರ, ಕೃಷ್ಣ ಮೂರ್ತಿ ಟೆಂಗುಂಟಿ ಮುಖಂಡರು ಹನುಮಂತಪ್ಪ ಪೂಜಾರಿ, ಬಾಳಪ್ಪ ಬೇವಿನಕಟ್ಟಿ ಚಂದ್ರಶೇಖರ ಹಿರೇಮನಿ, ಶರಣಪ್ಪ ಹಾದಿಮನಿ, ಹುಸೇನಪ್ಪ ಮುದೇನೂರು, ಹನುಮಂತಪ್ಪ ಶಿವನ ಗುತ್ತಿ ಶ್ರೀಕಾಂತ್ ಕೊರಡಕೇರಾ, ಶಿವರಾಜ್, ಕಟ್ಟಿಮನಿ ಆಂಜನೇಯ ಕಂದಕೂರ, ಗುರುರಾಜ ಕಲಾಲಬಂಡಿ, ಶರಣಪ್ಪ ಹಿರೆಮನ್ನಾಪೂರ, ಮರಿಯಪ್ಪ ಲಿಂಗದಹಳ್ಳಿ, ವಕೀಲರು, ನಾಗರಾಜ ರಾವಣಿಕಿ, ವಿನಾಯಕ ಮುದ್ನಾಳ, ಶರಣಪ್ಪ ಹಿರೆಮನಿ,ರಮೇಶ ಮ್ಯಾತ್ರೀ, ದುರುಗೇಶ್ ದೇವರಮನಿ, ಸುಖಮುನಿ ಗುಮಗೇರ ವಕೀಲರು, ಫಕೀರಪ್ಪ ಬಿಜಕಲ್ ಇನ್ನೂ ಮುಂತಾದವರು ಹಾಗೂ ಅನೇಕ ಒಳಮೀಸಲಾತಿ ಪರ ಹೋರಾಟಗಾರರು ಬೆಂಗಳೂರ ಕಾರ್ಯಕ್ರಮ ದಿನಾಂಕ 21 ಕ್ಕೆ ಬರುವಂತಹ ಪ್ರತಿಯೊಬ್ಬ ಮಾದಿಗ ಸಮುದಾಯದವರಿಗೆ ಕುಷ್ಟಗಿ ತಾಲೂಕಿನ ಮಾದಿಗ ಮಹಾಸಭಾ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತಾ ಹಾಗೂ ಮುಂದುವರೆದು ದಿನಾಂಕ 21/03/2025 ರಂದು ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆ ತರಬೇಕು ಎಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ಮೂಲಕ ತಾಲೂಕ ಅಧ್ಯಕ್ಷರು ಮಾದಿಗ ಮಹಾಸಭಾ ಕುಷ್ಟಗಿ. ನಾಗರಾಜ.ಮೇಲಿನಮನಿ ಯವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವರದಿ:ಶಿವಕುಮಾರ.ದೊಡ್ಡಮನಿ.ವಕೀಲರು ಕುಷ್ಟಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button