ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಮನವಿ ಮಾಡಿದರು ಕ್ರಮ ಜರುಗಿಸದೆ ದಿವ್ಯ ನಿರ್ಲಕ್ಷ್ಯ ತಳೆದಿರುವ ಅವರ ವಿರುದ್ಧ – ಸರ್ಕಾರದ ಕ್ರಮ ಯಾವಾಗ….?
ಅಗ್ನಿ ಮಾ.19

ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಗ್ರಾಮದಲ್ಲಿ ಯಾವುದೇ ಚರಂಡಿ ವ್ಯವಸ್ಥೆ. ರಸ್ತೆ ಮತ್ತು ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ವಾರ್ಡ್ ನಂಬರ್ 1 ಮತ್ತು ವಾರ್ಡ್ ನಂಬರ್ 3 ರಲ್ಲಿ ರಸ್ತೆ ಮತ್ತು ಚರಂಡಿ ಹಾಳಾಗಿ ರಸ್ತೆ ಮೇಲೆ ಚರಂಡಿ ನೀರು ಹರಿದಾಡಿ ರಸ್ತೆ ಹಳ್ಳದಂತೆ ಆಗಿ ದಿನಾಲು ರಸ್ತೆಯಲ್ಲಿ 2/ 3 ವಾಹನ ಸವಾರರು ಮತ್ತು ಕಾಲ್ನಡಿಗೆಯಲ್ಲಿ ಹೋಗುವವರು ಕೆಸರಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಇದರಿಂದ ಬೇಸತ್ತು ಗ್ರಾಮದವರು ಮನೆಗೆ 200 ರೂ ಅಂತೆ ಸುಮಾರು 20 ರಿಂದ 30 ಮನೆಯವರು ತಲಾ ಪಟ್ಟಿ ಹಾಕಿಕೊಂಡು ರಸ್ತೆ ದುರಸ್ಥಿಯಲ್ಲಿ ತೊಡಗಿ ಕೊಂಡಿದ್ದಾರೆ. ತಾಲೂಕ ಪಂಚಾಯಿತಿಗೆ ಮತ್ತು ಜಿಲ್ಲಾ ಪಂಚಾಯ್ತಿಗೆ ಅರ್ಜಿ ಕೊಟ್ಟರು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಅಗ್ನಿ ಗ್ರಾಮ ಟಿಪ್ಪು ಸುಲ್ತಾನ್ ಗ್ರಾಮದವರಾದ ರಾಜೇಶ್ ಕೊತ್ವಾಲ್ ಚಂದಾಹುಸೇನ ಮಕಾನದರ, ತನ್ವೀರ್. ಜಾಫರ್ ಯಾಸಿನ್ ಮೌಲಾಸಾಬ್ ಅಗ್ನಿ ಹಾಗೂ ಗ್ರಾಮದ ಮಲ್ಲಣ ಪೂಜಾರಿ ಮಧುಸೂದನ್ ಬಿರಾದರ್ ಮಹಮ್ಮದ್ ಶಾ, ಇಸ್ಮಾಯಿಲ್, ರಸೂಲ್ ಜಾಗಿರದಾರ್ ಇನ್ನಿತರರು ದುರಸ್ತಿ ವ್ಯವಸ್ಥೆಯಲ್ಲಿ ತೊಡಗಿ ಕೊಂಡಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಚಾಂದಾಹುಸೇನ್.ಎಮ್.ಶಾ ಹುಣಸಗಿ