ಡಾ, ಜೆ.ಎನ್ ರಾಮಕೃಷ್ಣೇಗೌಡರ ದಂಪತಿಗಳಿಗೆ “ಸಂತ ಸೇವಾರತ್ನ” – ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಕೆ.ಆರ್ ಪೇಟೆ ಮಾ.21

ಶ್ರೀ ಆದಿ ಚುಂಚನಗಿರಿ ಮಠದ ಕಾರ್ಯ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ಕೀರ್ತಿ ಭೈರವ್ಯೆಕ್ಯ ಡಾ, ಬಾಲಗಂಗಾಧರನಾಥ ಶ್ರೀಗಳಿಗೆ ಸೇರಿದೆ ಶ್ರೀಗಳ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿ ಶ್ರೀ ಮಠದ ಯಶಸ್ವಿಗೆ ತೆರೆಯ ಹಿಂದೆ ಶ್ರೀಕ್ಷೇತ್ರ ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಸುದೀರ್ಘ 50 ವರ್ಷಗಳ ಸೇವೆ ಸಲ್ಲಿಸಿದ ಹೇಮಗಿರಿ ಬಿ.ಜಿ.ಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ, ಜೆ.ಎನ್ ರಾಮಕೃಷ್ಣೇಗೌಡರಿಗೆ ಪಾಂಡವಪುರ ತಾಲೂಕು ನಾಗರೀಕ ಅಭಿನಂದನಾ ಸಮಿತಿ ಹಾಗೂ ಡಾ, ರಾಮಕೃಷ್ಣೇಗೌಡರ ಅಭಿಮಾನಿ ಬಳಗದ ವತಿಯಿಂದ “ಸಂತ ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು, ಪಾಂಡವಪುರ ತಾಲೂಕಿನ ಶ್ಯಾದಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ಡಾ, ಜೆ.ಎನ್ ರಾಮಕೃಷ್ಣೇಗೌಡ ರವರನ್ನು ಅಭಿಮಾನಿಗಳು ತೆರೆದ ವಾಹನದಲ್ಲಿ ವೇದಿಕೆಗೆ ಕರೆ ತಂದರು. ಡಾ, ಜೆ.ಎನ್ ರಾಮಕೃಷ್ಣೇಗೌಡರ ದಂಪತಿಗಳಿಗೆ “ಸಂತ ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ ಎ.ಡಿ.ಸಿ ಬಿ.ಸಿ ಶಿವಾನಂದಮೂರ್ತಿ, ಚಿತ್ರ ನಟಿ ಪ್ರೇಮಾ, ಪಂಚಮುಖಿ ಆಂಜನೇಯ ದೇವಸ್ಥಾನದ ಮುಖ್ಯಸ್ಥರಾದ ಧನಂಜಯ್ ಗುರೂಜಿ, ಹಾಸ್ಯ ಕಲಾವಿದರಾದ ವಿನೋದ್ ಗೊಬ್ಬರಗಾಲ,ಚಂದ್ರಫ್ರಭ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜ್, ಆರ್.ಟಿ.ಓ ಮಲ್ಲಿಕಾರ್ಜುನ್,ಮೇನಗಾರ ಪ್ರಕಾಶ್, ವಿಜೇಂದ್ರ ಮೂರ್ತಿ, ಎಸ್.ಎ ಮಲ್ಲೇಶ್, ಎಂ.ಎಲ್ ಕೆಂಪೂಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೃಷ್ಣರಾಜಪೇಟೆ ತಾಲ್ಲೂಕು ಘಟಕ ಅಧ್ಯಕ್ಷರಾದ ಲೋಕೇಶ್.ವಿ, ಹೊನ್ನೇನಹಳ್ಳಿ ಎಸ್.ರವಿ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಬಿಜಿಎಸ್ ಶಿಕ್ಷಕ ವೃಂದದವರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗೋವಿಂದರಾಜು.ಕೆ.ಕೂಡಲಕುಪ್ಪೆ.ಕೆ.ಆರ್ ಪೇಟೆ