ಡಾಕ್ಟರ್, ಬಾಬು ಜಗಜೀವನ್ ರಾಮ್ ರವರ – ಪ್ರತಿಮೆ ಲೋಕಾರ್ಪಣೆ.
ದೇವರ ಹಿಪ್ಪರಗಿ ಮಾ.24

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ಏಪ್ರಿಲ್ 6. ರಂದು ಹಸಿರು ಕ್ರಾಂತಿಯ ಹರಿಕಾರ ಡಾಕ್ಟರ್, ಬಾಬು ಜಗಜೀವನ್ ರಾಮ್ ರವರ ಜಯಂತಿ ಹಾಗೂ ಡಾ, ಬಾಬು ಜಗಜೀವನ ರಾಮ್ ರವರ ಪ್ರತಿಮೆ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಚಿತ್ರದುರ್ಗ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಹುಲಜಂತಿ ಮಾಳಿಂಗರಾಯ ಮಹಾರಾಜರು, ದೇವರ ಹಿಪ್ಪರಗಿ ಮತ್ತು ಜಾಲವಾದ ಗದ್ದಗಿಮಠ ಮಡಿವಾಳ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು. ಜ್ಯೋತಿ ಬೆಳಗಿಸುವವರು ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ ತಿಮ್ಮಾಪುರ. ಹಾಗೂ ಮಾಜಿ ಸಚಿವರು ಸಮಾಜ ಕಲ್ಯಾಣ ಇಲಾಖೆಯ ಎಚ್.ಆಂಜನೇಯ. ಬೃಹತ್ ಕೈಗಾರಿಕೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ್ ಮತ್ತು ಮಾಜಿ ಕೇಂದ್ರ ಸಚಿವರು ಹಾಗೂ ಹಾಲಿ ಸಂಸದರು ವಿಜಯಪುರ ರಮೇಶ ಜಿಗಜಿಣಗಿ ಉದ್ಘಾಟನೆ ನೆರವೇರಿಸುವರು. ಜಾಂಭವ ಯುವ ಸೇನಾ ರಾಜ್ಯಾಧ್ಯಕ್ಷರಾದ ಡಾಕ್ಟರ್, ರಮೇಶ್ ಚಕ್ರವರ್ತಿ ಆಗಮಿಸಲಿದ್ದಾರೆ. ಎಂದು ಡಾಕ್ಟರ್ ಬಾಬು ಜಗಜೀವನ್ ರಾಮ್ ಯುವಕ ಸಂಘದ ಅಧ್ಯಕ್ಷರಾದ ರಾಹುಲ್ ದೊಡಮನಿ ಹಾಗೂ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಮಹಾಂತೇಶ ಹಾದಿಮನಿ.ವಿಜಯಪುರ