ಮಾರನಬಸರಿ ಗ್ರಾಮದಲ್ಲಿ ನಮ್ಮೂರ ನಮ್ಮ ಕೆರೆಯ 785 ನೇ. ಕೆರೆಯ – ಹಸ್ತಾಂತರ ಕಾರ್ಯಕ್ರಮ.
ಮಾರನಬಸರಿ ಮಾ.26

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಣ ತಾಲೂಕ ಮಾರನಬಸರಿ ಗ್ರಾಮದಲ್ಲಿ ನಮ್ಮೂರ ನಮ್ಮ ಕೆರೆಯ 785 ನೇ. ಕೆರೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಶ್ರೀ ಷಡಕ್ಷರ ಬ್ರಹ್ಮ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿಯವರು ನರೇಗಲ್ಲ, ಶ್ರೀಮನ್ನ ನಿರಂಜನ ಪ್ರಣವ ಸ್ವರೂಪಿ ಅಭಿನವ ಚನ್ನಬಸವ ಮಹಾ ಸ್ವಾಮಿಜಿಯವರು ಶಾಖಾ ಯೋಗ ಮಂದಿರ ನಿಡಗುಂದಿಕೊಪ್ಪ ಇವರು ಕಾರ್ಯಕ್ರದಲ್ಲಿ ಆಶೀರ್ವಚನ ನೀಡಿದರು. ಈ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೌರವಾನ್ವಿತ ಚಂದ್ರಶೇಖರ್ ಜೆ ಪ್ರಾದೇಶಿಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಪ್ಪಳ ಯೋಜನೆಯ ವಿವಿಧ ಕಾರ್ಯಕ್ರಮಗಳು ಮತ್ತು ಪೂರ್ವಜರು ಮತ್ತು ಪೂಜ್ಯರನ್ನು ನೆನೆಯುವ ಬಗ್ಗೆ ಮಾಹಿತಿ ನೀಡಿದರು. ಗದಗ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಯೋಗೇಶ್ ಎ ರವರು ಕೆರೆಯ ಸದ್ಭಳಕೆ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನ ಯೋಜನಾಧಿಕಾರಿಗಳಾದ ಮಹಾಬಲೇಶ್ವರ ಪಟಗಾರ ಸರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನಲ್ಲಿ ಮಾಡಲಾದ ಯೋಜನೆಯ ಅಂಕಿ ಅಂಶಗಳನ್ನು ಮಾಹಿತಿ ನೀಡಿದರು.ಗ್ರಾಮ ಪಂಚಾಯತಿಯ ಸದಸ್ಯರಾದ ಶಿವಕುಮಾರ್ ದಿಂಡುರವರು ಗ್ರಾಮದಲ್ಲಿ ಕೆರೆ ಕಾಮಗಾರಿ ಮಾಡಿರುವುದರಿಂದ ಗ್ರಾಮದ ಜನರಿಗೆ ಅನುಕೂಲತೆ ಬಗ್ಗೆ ಕ್ಷೇತ್ರದ ಪೂಜ್ಯರಿಗೆ ತುಂಬಾ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು. ಕೆರೆ ಸಮಿತಿಯ ಅಧ್ಯಕ್ಷರಾದ ಚಂದ್ರು ಮಾರನಬಸರಿ ಸ್ವಾಮಿಯ ದಯದಿಂದ ಕೆರೆ ನೀರು ತುಂಬಲಿ ಎಂದು ಕೇಳಿಕೊಂಡರು. ತಾಲೂಕಿನ ಕೃಷಿ ಮೇಲ್ವಿಚಾರಕ ಶಂಭುಲಿಂಗ ವರದಿವಾಚನ ಮಾಡಿದರು ಕೆರೆಯ ಹಸ್ತಾಂತರದ ದಾಖಲಾತಿಯನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿವರಿಸಿದರು. ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವೀರಣ್ಣ ಮರಡಿ ಕೆರೆಯ ಕಾಮಗಾರಿ ಯಿಂದ ಗ್ರಾಮದ ಜನರಿಗೆ ಬಾಳ ಸಂತೋಷ ತಂದಿದೆ ಎಂದು ವಿವರಿಸಿದರು. ವಲಯದ ಮೇಲ್ವಿಚಾರಕರಾದ ರಾಘವೇಂದ್ರಗುಡಿ ರವರು ಸ್ವಾಗತಿಸಿದರು. ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಶಂಶೋದ್ದೀನ್ ಸಂಕನೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕೆರೆ ಸಮಿತಿಯ ಉಪಾಧ್ಯಕ್ಷರಾದ ಶ್ರೀಕಾಂತ್ ಕುಲಕರಣಿ ಶ್ರೀಶೈಲಯ್ಯ ಶಾಂತಿಗಿರಿ ಮಠ ಶಿವಶರಣಪ್ಪ ಹಾದಿಮನಿ ಉಮೇಶ್ ಜಾಲಿಹಾಳ ಕವಿತಾ ವಣಗೇರಿ ಸುವರ್ಣ ಅಲಗೇರಿ ಒಕ್ಕೂಟದ ಅಧ್ಯಕ್ಷರಾದ ಲಲಿತಾ ಮಾರನಬಸರಿ ಕಾರ್ಯಕ್ಷೇತ್ರದ ಸೇವಾ ಪ್ರತಿ ನಿಧಿಯಾದ ವಿಜಯಲಕ್ಷ್ಮಿ ಹಾದಿಮನಿ ಐಶ್ವರ್ಯ ಶಂಭುಲಿಂಗ ಕೆ ನಿರೂಪಿಸಿದರು ಇನ್ನೂ ಮಂತಾದ ಗಣ್ಯ ಮಾನ್ಯರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಐಶ್ವರ್ಯ ಶಂಭುಲಿಂಗ ಕೆ ನಿರೂಪಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ ಗದಗ