ಶ್ರೀ ಯಲ್ಲಾಲಿಂಗ ಮಹಾರಾಜರ – ಸಡಗರದ ರಥೋತ್ಸವ.
ಮುದ್ದೇಬಿಹಾಳ ಮಾ.26

ತಾಲೂಕಿನ 4 ನೇ. ವರ್ಷದ ಮಹಾರಥೋತ್ಸವ ಮಾರ್ಚ್ 25/3/2025 ಮಂಗಳವಾರ ದಂದು ವಿಜ್ರಂಭಣೆ ಯಿಂದ ಜರುಗಿತು ಇದಕ್ಕೂ ಮುಂಚೆ ಬೆಳಿಗ್ಗೆ 7 ಗಂಟೆಗೆ ಲಿಂ. ಶ್ರೀ ಸಿದ್ದಲಿಂಗೇಶ್ವರ ಮತ್ತು ಯಲಾಲ್ಲಿಂಗೇಶ್ವರ ಗದ್ದುಗೆ ರುದ್ರಾಭಿಷೇಕ ಮಾಡಿ ನಂತರ ಶ್ರೀ ಅಕ್ಕಮಹಾದೇವಿ ಮಹಿಳಾ ಸಂಘ ರೂಡಗಿ ಇವರಿಂದ ರುದ್ರಾಭಿಷೇಕ ಪಂಚಮುಖಿ ಪಲ್ಲಕ್ಕಿಗಳಿಗೆ ಮಹಾ ಪೂಜೆ ಸಲ್ಲಿಸಿದ ನಂತರ ಪೂಜ್ಯಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರು ಪುಣ್ಯಾಶ್ರಮ ರೂಡಗಿ ಹಾಗೂ ಹಳ್ಳೂರಿನ ಶ್ರೀ ತಿಪ್ಪಣ್ಣ ಪೂಜಾರಿ ಇವರಿಂದ ಅಗ್ನಿ ಪ್ರವೇಶ ಮಾಡಿದರು.

ಅಂದೆ ಸಾಯಂಕಾಲ 5 ಗಂಟೆಗೆ ಗುಂಡಕರ್ಜಗಿ ಗ್ರಾಮದ ಸದ್ಭಕ್ತರಿಂದ ತೇರಿನ ಕಳಸ ಮತ್ತು ಛತ್ರಿಯನ್ನು ಹಾಗೂ ಆಲಕೊಪ್ಪರ್ ಗ್ರಾಮದ ಸದ್ಭಕ್ತರಿಂದ ತೇರಿನ ಮಿನಿ ಹಗ್ಗ ಹಾಗೂ ರೂಡಗಿ ತಾಂಡದ ಸದ್ಭಕ್ತರಿಂದ ತೆರಿಗೆ ಹಾರವನ್ನು ಶ್ರೀ ಕೊಡೆಕಲ್ಲ ಬಸವೇಶ್ವರ ದೇವಸ್ಥಾನಕ್ಕೆ ಬರಮಾಡಿ ಕೊಂಡು ನಂತರ ಸಕಲ ವಾದ್ಯಗಳೊಂದಿಗೆ ಶ್ರೀ ಯಲ್ಲಾಲಿಂಗ ಮಹಾರಾಜರ ಮಠಕ್ಕೆ ಕರೆ ತರಲಾಯಿತು ಅಂದೇ ಸಾಯಂಕಾಲ 6 ಗಂಟೆಗೆ ಯಲ್ಲಾಲಿಂಗ ಮಹಾರಾಜರು ರಥೋತ್ಸವಕ್ಕೆ ಚಾಲನೆಯನ್ನು ನೀಡಿದರು.
ಈ ವೇಳೆ ಭಕ್ತರು ತೆರಿಗೆ ಬಾಳೆಹಣ್ಣು. ಮುತ್ತತ್ತಿ ಎಸೆಯುವುದರ ಮೂಲಕ ಭಕ್ತಿಯನ್ನು ಮೆರೆದರು. ಅಂದೇ ರಾತ್ರಿ 10 ಗಂಟೆಗೆ ಬಸವನ ಬಾಗೇವಾಡಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿ ಮಹಾತ್ಮೆ ಎಂಬ ಬಯಲಾಟ ನಡೆಯಲಾಯಿತು. ಇದೇ ವೇಳೆ ಗ್ರಾಮದ ಸಮಸ್ತ ದೈವ ಮಂಡಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತರು ಮತ್ತು ಮುದ್ದೇಬಿಹಾಳ ಪೊಲೀಸ್ ಇಲಾಖೆಯವರು ಅಚ್ಚುಕಟ್ಟಾಗಿ ಬಂದೋಬಸ್ತ್ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ