ಮಹಿಳಾ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ – ವಿಶೇಷ ಗ್ರಾಮ ಸಭೆ.
ಯಲಗೋಡ ಮಾ.28

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಇಂದು ಮಹಿಳಾ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ವಿಶೇಷ ಗ್ರಾಮ ಸಭೆ ವಿಕಲ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸರಕಾರ ದಿಂದ ದೊರೆಯುವ ಸೌಲಭ್ಯಗಳು ಕುರಿತು ಸಾರ್ವಜನಿಕರಿಗೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿತು. ಹಾಗೂ ದುಡಿಯೋಣ ಬಾ ಅಭಿಯಾನ ಎಂಬ ಕಾರ್ಯಕ್ರಮವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ೧೫ ಮಾರ್ಚ್ ೨೦೨೫ ರಿಂದ ೩೦ ಮಾರ್ಚ್ ೨೦೨೫ ವರೆಗೆ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಉದ್ಯೋಗ ಒದಗಿಸಲು ಜಿಲ್ಲಾ ಪಂಚಾಯತ ವಿಜಯಪುರ ತಾಲ್ಲೂಕ ಪಂಚಾಯತಿ ದೇವರ ಹಿಪ್ಪರಗಿ ಗ್ರಾಮ ಪಂಚಾಯತಿ ಯಲಗೋಡ ಇವರು ಸಂಯಕ್ತ ಆಶ್ರಯದಲ್ಲಿ.

ಈ ಎಲ್ಲಾ ಗ್ರಾಮ ಸಭೆಯ ನೇತೃತ್ವದಲ್ಲಿ ವಹಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೂಪಾ ಚಂದ್ರಶೇಖರ ಅಸ್ಕಿ ಇವರು ಅಧ್ಯಕ್ಷತೆಯಲ್ಲಿ ನಡೆಯಿತು, ಅಂಗವಿಕಲರಿಗೆ ವ್ಹಿಲ್ ಚರ್ ವಿತರಣೆ ಮಾಡಿದರು. ನೂಡಲ್ ಅಧಿಕಾರಿಗಳಾದ ಬಂಟನೂರ ಅವರು ಅಂಗವಿಕಲರಿಗೆ ದೊರೆಯುವ ಸೌಲಭ್ಯಗಳನ್ನು ವಿವರಣೆ ಮಾಡಿ ಮಾತನಾದರು.

ಹಾಗೂ ಈ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀದೇವಿ ಮಾದರ. ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಹಡಪದ, ಕಾರ್ಯದರ್ಶಿಯಾದ ಅಮೀತಾ ಗತಾಟೆ ಹಾಗೂ ಗ್ರಾಮದ ಮುಖಂಡರಾದ ಚಂದ್ರಶೇಖರ ಅಸ್ಕಿ ಬೂತಾಳಿ ಇಂಗಳಗಿ ಶರಣಗೌಡ ಪಾಟೀಲ ವಂದಾಲ ಮಾಂತೇಶ ಕೂಟನೂರ ದೇವೇಂದ್ರ ಮಾದರ ಮಲ್ಲಕಪ್ಪ ಮಾದರ ಸಿಬ್ಬಂದಿಗಳಾದ ಡಿ.ಎಸ್ ಕಣಮೇಶ್ವರ ಸಿದ್ದು ನಾಟಕಾರ ಮೈಬುಬಾ ಬಾಗವಾನ ಮುತ್ತು ನಾಟಕಾರ ದಾನಮ್ಮ ಜೇರಟಗಿ ಮಹಿಳಾ ಸಂಘದವರಾದ ಮಾಲಿನಬಿ ದೊಡ್ಡಮನಿ ಎಂ.ಎಂ ಪಾಟೀಲ ಯಮನವ್ವ ತಳ್ಳೋಳ್ಳಿ ಲಕ್ಷ್ಮೀ ಹೊಸಮನಿ ರೇಖಾ ರಾಠೋಡ ರೇಣುಕಾ ನಾಟಕಾರ ಕೋಮಲ ಚವ್ಹಾಣ ಹಾಗೂ ನಿಂಗಪ್ಪ ಪೂಜಾರಿ ರಾಜು ಡವಾಳರ ಹಾಗೂ ಇನ್ನೂ ಹಲವಾರು ಅಂಗವಿಕಲರು ಹಾಗೂ ಸಾರ್ವಜನಿಕರು ಈ ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ