ಯತ್ನಾಳರ ಉಚ್ಚಾಟನೆ ಖಂಡಿಸಿ ಟೈರಿಗೆ – ಬೆಂಕಿ ಹಚ್ಚಿ ಪ್ರತಿಭಟನೆ
ಬಸವನ ಬಾಗೇವಾಡಿ ಮಾ.28

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ನಡೆದ ಪ್ರತಿಭಟನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಹಿಸಿದ ಪಂಚಮಸಾಲಿ ಸಮಾಜದ ಹಾಗೂ ಬಸನಗೌಡ ಪಾಟೀಲ್ ಯತ್ನಾಳರ ಅಭಿಮಾನಿಗಳು ಪ್ರತಿಭಟನೆ ಉದ್ದೇಶಿಸಿ ಪಂಚಮಸಾಲಿ ಸಮಾಜ ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರೀಕಾಂತ ಕೊಟ್ರಶೆಟ್ಟಿ ಅವರು ಮಾತನಾಡಿದರು.

ಬಸನಗೌಡ ಪಾಟೀಲ್ ಯತ್ನಾಳರು ಒಂದು ಸಮಾಜಕ್ಕೆ ಸೀಮಿತವಾಗದೆ ಇಡೀ ಹಿಂದೂ ಸಮಾಜಕ್ಕೆ ಅವರು ಒಂದು ಶಕ್ತಿ ಇದ್ದ ಹಾಗೆ ಹಿಂದುತ್ವ ಬಗ್ಗೆ ಮಾತನಾಡಬಾರದಾ ಅವರನ್ನು ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿರುವುದು ಖಂಡನೀಯ ಮುಂಬರುವ ದಿನಗಳಲ್ಲಿ ಯತ್ನಾಳರ ಶಕ್ತಿ ಏನು ಎಂಬುದು ನಾವು ತೋರಿಸುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ವಿವಿಧ ಮುಖಂಡರು ಅಭಿಮಾನಿಗಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ