ರಂಜಾನ್ ಹಬ್ಬದ ನಿಮಿತ್ತ ಮಸೀದಿಗಳಿಗೆ ಹಣ್ಣು ಹಂಪಲು – ವಿತರಿಸಿದ ನಾನಾ ಪಕ್ಷದ ಮುಖಂಡರು.
ಮಾನ್ವಿ ಮಾ.29

ಮಾನ್ವಿಯಲ್ಲಿ ಸೌಹಾರ್ದತೆ ಸಾರೋಣವೆಂದು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಮಸೀದಿಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸಿದರು.
ಸಚಿವ ಎನ್.ಎಸ್ ಬೋಸರಾಜು ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಮಾಜಿ ಸಚಿವ ಕೆ.ಶಿವನಗೌಡ ನಾಯಕರ ಅಭಿಮಾನಿಗಳು ಪ್ರತಿಯೊಂದು ಮಸೀದಿಗಳಿಗೆ ತೆರಳಿ ಸೌಹಾರ್ದತೆಯ ವಿಚಾರ ಹಂಚಿ ಕೊಂಡರು.

ಮಾನ್ವಿ ಇತಿಹಾಸದಲ್ಲಿ ಮೊದಲಿನಿಂದಲೂ ಸೌಹಾರ್ದತೆಯ ಊರಾಗಿ ಹೆಸರಲ್ಲಿದೆ. ಹೀಗಾಗಿ ನಾವೆಲ್ಲರೂ ಒಂದಾಗಿ ಸಮಾಜ ಮುಖಿಯಾಗಿ ಸೇವೆ ಮಾಡುವ ಕೆಲಸ ಮಾಡೋಣ ಎಂದು ಸಚಿವ ಎನ್.ಎಸ್ ಬೋಸರಾಜು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ