“ಗುಣ ಅರಿತು ಮಾಡುವ ಸ್ನೇಹ ಶ್ರೇಷ್ಠ”…..

ಜ್ಞಾನವು ದರಿದ್ರತನ ದೂರ ತಳ್ಳುತ್ತದೆ
ಸತ್ಯತನ ಶತ್ರುಗಳನ್ನು ಹುಟ್ಟಹಾಕುತ್ತದೆ
ನಮ್ಮಏಳ್ಗೆ ವಿರೋಧಿಗಳ ಹೊಟ್ಟೆ ಉರಿಸುವದು
ಕಲಿಯುಗದಲಿ ವಿಧೆಯತೆಗೆ ಮೋಸ ಜಾಸ್ತಿ
ನೇರ ನಡೆ ನುಡಿಗೆ ಏಕಾಂಗಿತನದಲಿ ಇರಿಸುವುದು
ಹೇಳಿ ಕೇಳಿ ಮಾಡುವವ ನಿಜವಾಗಿ ಬಲಿಪಶುಯಾಗುವನು
ಹೇಳದೇ ಕೇಳದೆ ಮಾಡುವ ಕಾಯಕವು ಸಾಧಕತನವು
ಏದುರಿಗೆ ಹೋಗಳುವವರು ಹಿಂದುಗಡೆ ತೇಜೋವಧೆ ಮಾಡವದು ಖಚಿತ
ಸಮಕ್ಷಮ ಕೋಪದಿ ಗದರಿಸುವವನು ಎಂದಿಗೂ ಕೇಡ ಬಯಸುವದಿಲ್ಲ
ನಯವಂಚಕತನದವರು ನಿಜ ಹಿತಶತ್ರುಗಳು
ಏದಿರಿನಲಿ ಸೌಮ್ಯ ಸ್ವಭಾವ ಪ್ರದರ್ಶಿಸಿ
ಬೇರೆಯವರ ಮುಂದೆ ನಿಮ್ಮತನಕ್ಕೆ ಕಪ್ಪು ಮಸಿ ರಾಚುವುದು ಖಚಿತ
ಸಿಹಿ ಮಧುರ ಮಾತನಾಡವರನ್ನು ನಂಬಬೇಡಿ
ನೀವು ಇಷ್ಠ ಪಡುವ ವ್ಯಕ್ತಿ ತನ್ನ ಅನುಕೂಲಕಕ್ಕೆಯಾಮಾರಿಸುವವರು ಇರಬಹುದು
ನೀವಿಲ್ಲದ ವೇಳೆ ವಿಷ ಕಕ್ಕಿ ಖುಷಿ ಪಡುವವರೇ ಅಧಿಕತಮರು
ಮಾನವ ಸ್ನೇಹ ಜೀವಿ ಮೈಮರೆಯದಿರಿ
ಗುಣ ಅರಿತು ಮಾಡುವ ಸ್ನೇಹ ಶ್ರೇಷ್ಠ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ.