ಬಾಬು ಜಗಜೀವನ್ ರಾಮ್ ಅವರ 118 ನೇ. – ಜಯಂತೋತ್ಸವ ಆಚರಣೆ.

ನಾದ ಕೆ.ಡಿ ಏ.05

ಇಂಡಿ ತಾಲೂಕಿನ ನಾದ ಕೆ.ಡಿ ಗ್ರಾಮದಲ್ಲಿ ಇಂದು ಶನಿವಾರ ಬಾಬು ಜಗಜೀವನ್ ರಾಮ್‌ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬಾಬು ಜಗಜೀವನ್ ರಾಮ್ ಅವರು ತಮ್ಮ ಕಾಲಾವಧಿಯಲ್ಲಿ ನಮ್ಮ ದೇಶದಲ್ಲಿ ಸಾಮಾಜೀಕ ತಾರತಮ್ಯ ಅನೇಕ ಕಹಿ ಅನುಭವಗಳನ್ನು ಅನುಭವಿಸಿ, ಅದನ್ನು ಹೋಗಲಾಡಿಸಲು, ದೇಶದ ಪ್ರಗತಿಗಾಗಿ ರಾಜಕೀಯಕ್ಕೆ ಬಂದು ದೇಶದ ಉಪ ಪ್ರಧಾನಿಯಾದ ಬಾಬು ಜಗಜೀವನ್ ರಾಮ್ ಅವರು ಎಪ್ರಿಲ್ 5. 1908 ರಲ್ಲಿ ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದರು. ಅವರು ಅರ್ಧ ಶತಮಾನಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾದ ರಾಜಕಾರಣಿ ಎಂಬ ವಿಶ್ವ ದಾಖಲೆ ಇದೆ ಎಂದು ಹಾಲಿ ಗ್ರಾ.ಪಂಚಾಯತ ಸದಸ್ಯರಾದ ಶ್ರೀ ಪೈಗಂಬರ್ ದೇಸಾಯಿಯವರು ಮಾತನಾಡಿದರು. ನಂತರ ಮಾಜಿ ಸೈನಿಕರಾದ ಸುರೇಶ ಬಡಿಗೇರ ಮಾತನಾಡಿ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶ ಪ್ರಾಯರಾದವರು. ಅವರು ಹಸಿರು ಕ್ರಾಂತಿಯ ಹರಿಕಾರ, ಕಾರ್ಮಿಕ ಖಾತೆಯ ಶಿಲ್ಪಿ ಎಂಬ ಹೆಗ್ಗಳಿಕೆಗೆ ಪಾತ್ರ ರಾದವರು. ಅವರ ಜನ್ಮ ದಿನವನ್ನು ‘ಸಮಾನತೆಯ ದಿನ’ ಎಂದು ಆಚರಿಸಲಾಗುವುದು ಎಂದು ಹೇಳಿದರು. ರಕ್ಷಣಾ ವೇದಿಕೆಯ ಅಧ್ಯಕ್ಷರಾದ ರಾಜಕುಮಾರ ಪಾಟೀಲ ಅವರು ಮಾತನಾಡಿ ಜಗಜೀವನ ರಾಮ್ ಅವರು ಮೇಲು–ಕೀಳೆಂಬ ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಶ್ರಮಿಸುತ್ತಾ, ಸಾಮಾಜಿಕ ಬದಲಾವಣೆಗಾಗಿ ಹೋರಾಡಿದರು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.ಯುವ ನಾಯಕರಾದ ಮಲ್ಲು ಮಾದರ ಮಾತನಾಡಿ, ‘ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್ ಅವರು, ದೇಶದಲ್ಲಿ ಆಹಾರದ ಕೊರತೆ ಯಾಗದಂತೆ ಭದ್ರ ಅಡಿಪಾಯ ಹಾಕಿದರು. ಸರ್ವ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸುತ್ತಾ, ಸಮ ಸಮಾಜ ನಿರ್ಮಾಣಕ್ಕೆ ಬದುಕಿನುದ್ದಕ್ಕೂ ಹೋರಾಡಿದ್ದು, ಇಂದಿಗೂ ಪ್ರೇರಣೆ ಯಾಗಿದೆ’ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಜಕುಮಾರ ಪಾಟೀಲ.ಮಾಜಿ ಗ್ರಾಮಪಂಚಾಯತ ಸದಸ್ಯರಾದ ಪೈಗಂಬರ್ ದೇಸಾಯಿ. ಮಾಜಿ ಸೈನಿಕರಾಗಿ ಸುರೇಶ ಬಡಿಗೇರ. ಉಮರೇಲಿ ಜಮಾದಾರ. ಮಲ್ಲು ಮಾದರ. ಬಸವರಾಜ ಕಟ್ಟಿಮನಿ. ಸದಾಶಿವ ಮಾಶ್ಯಾಳಕರ. ಶ್ರೀಶೈಲ ಕಟ್ಪಿಮನಿ. ಕನ್ನಪ್ಪ ಕಟ್ಟಿಮನಿ. ಗುಂಡುರಾವ್ ಮಡ್ನಳ್ಳಿ. ಮೌನೇಶ ಬಡಿಗೇರ. ಸಂಜೀವ ಮಾಶ್ಯಾಳಕರ. ಲಕ್ಕಪ್ಪ ಕಟ್ಟಿಮನಿ. ಶಂಕರ ಕಟ್ಟಿಮನಿ ಇತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button