ರಾಮವಾಡಗಿ ಗ್ರಾಮದಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 118 ನೇ. ಜಯಂತಿ ಆಚರಿಸಲಾಯಿತು.
ರಾಮವಾಡಗಿ ಏ.06

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಾಡಗಿ ಗ್ರಾಮದಲ್ಲಿ ಡಾಕ್ಟರ್, ಬಾಬು ಜಗಜೀವನ್ ರಾಮ್ ರವರ 118 ನೇ. ಜಯಂತೋತ್ಸವವನ್ನು ರಾಮವಾಡಗಿ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಉಪನ್ಯಾಸಕರು ಅತಿಥಿಗಳು ಮುಖ್ಯ ಅತಿಥಿಗಳು ಉದ್ಘಾಟಕರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಗೌರವ ಸನ್ಮಾನ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು. ಮುತ್ತಣ್ಣ ಕಲ್ಮಡಿ ಹುನಗುಂದ ತಾಲೂಕು ಗೌರವ ಅಧ್ಯಕ್ಷರು ಕ.ರ.ವೇ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮದ ಗುರು ಹಿರಿಯರೊಂದಿಗೆ ಬಾಬು ಜಗಜೀವನ್ ರಾಮ್ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷರು ಆದ ಹನಮಂತ ಮಾದರ ಶಿಕ್ಷಕರು ಶುಭ ಹಾರೈಸಿದರು.

ಹಾಗೂ ಉಪನ್ಯಾಸಕರು ಆದ ಸಮೀರ್ ಸರಕಾವಸ ಸ್ಪಂದನಾ ಕಾಲೇಜು ಉಪನ್ಯಾಸಕರು ಇಲಕಲ್ಲ ಬಾಬು ಜೀ ಯವರ ಸಾಧನೆ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದರು, ಸ್ವತಂತ್ರ ಭಾರತದ ದಿನ ದಲಿತರ ದಮನಿತರ ಉದ್ದಾರಕ್ಕೆ ಅಗಲಿರುಳು ಶ್ರಮಿಸಿ ಇತಿಹಾಸದ ಪುಟಗಳಲ್ಲಿ ಉಳಿದು ಆಧುನಿಕ ಭಾರತದ ನಿರ್ಮಾತೃ ಕೃಷಿ, ಕಾನೂನು, ಸಂಪರ್ಕ, ಸೇರಿದಂತೆ ದೇಶದ ಜನರಿಗೆ ಸೌಲಭ್ಯ ಮುಟ್ಟುವಲ್ಲಿ ನಾವೆಲ್ಲ ಸಹಕಾರ ನೀಡಬೇಕು ಎಂದರು. ರಮೇಶ್ ಗೌಡ ಬಿರಾದಾರ ಉಪನ್ಯಾಸಕರು ವಸ್ತ್ರದ ಕಾಲೇಜು ಹುನಗುಂದ ರವರು ಸೌಲಭ್ಯಗಳ ಮರೆಯುವ ಕಾಲದಲ್ಲೂ ಸಹಿತ ಹಗಲಿರುಳು ಶ್ರಮ ಪಟ್ಟು ಪ್ರಾಮಾಣಿಕ ನಂಬುಕೆಗೆ ಪಾತ್ರರಾಗಿ ದೇಶಕ್ಕೆ ಹೆಸರಾಗಿ ಹಸಿರು ಕ್ರಾಂತಿಕಾರರಾಗಿ ಭಾರತದ ದೇಶಕ್ಕೆ ಮಹತ್ವ ಸೇವೆ ಸಲ್ಲಿಸಿ ಜೀವನದ ಬದುಕು ಸಂಸ್ಕಾರದ ವಿಷಯ ಸ್ವವಿವರದ ಬಗ್ಗೆ ತಿಳಿಸಿದರು. ಎಂ.ಬಿ ಮೇಲಗಿ ಉಪನ್ಯಾಸಕರು ಸಂವಿಧಾನದ ಪ್ರಸ್ತಾವನೆ ಸರ್ವರಿಗೂ ಸಮಾನತೆ ಬಗ್ಗೆ ತಿಳಿಸಿದರು, ಜಗದೀಶ್ ಮೂಗನೂರ ಉಪನ್ಯಾಸಕರು ವಿಶೇಷವಾಗಿ ಅತ್ಯಂತ ವಿಶ್ವಾಸ ಪೂರ್ವಕವಾಗಿ ಡಾ, ಬಾಬು ಜಗಜೀವನ್ ರಾಮ್ ಬಗ್ಗೆ ಸಮಾನತೆ ಸಂಘಟನೆ ಪರಿವರ್ತನೆ ಬಗ್ಗೆ ತಿಳಿಸಿ ಅವರ ಸಾಧನೆ ಬಗ್ಗೆ ಕುರಿತು ಮಾತನಾಡಿದರು.

ಎಲ್ಲಾ ಮಕ್ಕಳಿಗೆ ಶಿಕ್ಷಣ ಒದಗಿಸಬೇಕು ಎಲ್ಲಾ ಸರಕಾರಗಳ ಸೌಲಭ್ಯಗಳನ್ನು ಪಡೆದು ಸಾಧಕರ ಹಾದಿಯಲ್ಲಿ ನಡೆಯೋಣ ಎಂದರು. ಬಸವರಾಜ ಅಂಗಡಿ ಗುರುಗಳು ಸರ್ವರಿಗೂ ಸೇವಾ ಮನೋಭಾವ ಬೆಳಸಬೇಕು ಉಳಿಸಬೇಕು ಎಂದು ವಂದನೆಗಳನ್ನು ಸಲ್ಲಿಸಿ ಬಾಬು ಜೀ ರವರ ಗೌರವ ಪುರಸ್ಕಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಮನೂರ ಚೌಡಾಪುರ ಶಿಕ್ಷಕರು ಶಿಕ್ಷಣ ಸ್ವತ್ತು ಒಳ್ಳೆಯ ಮನುಷ್ಯ ವಿಚಾರಗಳನ್ನು ಉದಾಹರಣೆ ಸಹಿತ ತಿಳಿಸಿ ಕೊಟ್ಟರು ಹನಮಂತ ಮಾದರ ಪ್ರಾಸ್ತವಿಕವಾಗಿ ಸ್ವಾಗತಿಸಿ ಗ್ರಾಮದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಲಾರ್ಪಣೆ ಮಾಡಿದರು.

ದಂಡನಗೌಡ ದೊಡಮನಿ ಗ್ರಾಮ ಪಂಚಾಯತ್ ಸದಸ್ಯರು, ಶಾಂತು ಮೂಕಿ ವಕೀಲರು ಹುನಗುಂದ ಹುಸೇನಪ್ಪ ಪೂಜಾರಿ ಸಾ. ಇದ್ದಲಗಿ ಬಸವರಾಜ ತಿಮ್ಮಾಪುರ ಮತ್ತು ಮುದ್ದು ವಿದ್ಯಾರ್ಥಿಗಳಾದ ಸೌಮ್ಯ.ಸಿ ಇಂಮ್ರಾಪುರ, ಸ್ನೇಹಾ ಪೂಜಾರಿ, ಭೀಮವ್ವ ಸು ಬದಿನಾಳ ಇತರ ವಿದ್ಯಾರ್ಥಿಗಳು ಡಾ, ಬಾಬು ಜಗಜೀವನ್ ರಾಮ್ ಗ್ರಾಮೀಣಾಭಿವೃದ್ಧಿ ಸಂಘವು ನೀಡಿದ ಗ್ರಾಮದ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾಗಿ ಹಾಜರಿದ್ದರು. ಮಹಾಂತೇಶ್.ಪಾಪನಾಳ್ ಉಪಸ್ಥಿತರಿದ್ದು. ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.ಗಂಗಪ್ಪ ಕಡೇಮನಿ, ಬೈಲಪ್ಪ ಮಾದರ, ಅಭಿ ಬ್ರಮ್ಮಾವರ ಇತರರು ಯುವಕ ಮಿತ್ರರು ಹಾಜರಿದ್ದರು ಜ್ಯೋತಿ ಬೆಳಗಿಸಿ ಶುಭಾಶಯಗಳು ತಿಳಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾ. ರಾಮವಾಡಗಿ. ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ