ರಾಮ ನವಮಿ ಪ್ರಯುಕ್ತ ಹನುಮಾನ (ಹಳ್ಳಿ ರಾಯ) ಮಂದಿರದಲ್ಲಿ – ವಿಶೇಷ ಪೂಜೆ.

ಯಡ್ರಾಮಿ ಏ. 06

ರಾಮ ನವಮಿ ಪ್ರಯುಕ್ತ ಇಂದು ಯಡ್ರಾಮಿ ತಾಲೂಕಿನ ಇಜೇರಿಯಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಹನುಮಾನ (ಹಳ್ಳಿರಾಯ) ಮಂದಿರದಲ್ಲಿ ರಾಮನ ಬಂಟ ಹನುಮನ ವಿಗ್ರಹಕ್ಕೆ ಮತ್ತು ಶ್ರೀ ರಾಮಚಂದ್ರನ ಭಾವ ಚಿತ್ರಕ್ಕೆ ವಿಶೇಷ ಪೂಜೆಯ ಕಾರ್ಯಕ್ರಮ ಮಾಡಲಾಯಿತು.ಈ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಮತ್ತು ವಾಲ್ಮೀಕಿ ಸಮುದಾಯದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಮೇಶ ಮೇಲಗಿರಿ ಭಗವಾನ ಶ್ರೀರಾಮ ನಾಮದಲ್ಲಿ ಒಂದು ಅದ್ಭುತವಾದ ಶಕ್ತಿ ಇದೆ. ಇಂದೆ ತ್ರೇತಾಯುಗದ ಕಾಲದಲ್ಲಿ ಮಹರ್ಷಿ ವಾಲ್ಮೀಕಿ ಅಥವಾ ರತ್ನಾಕರ ಎಂಬವವರು ತಮ್ಮ ಜೀವನೋ ಪಾಯಕ್ಕಾಗಿ ಬೇಟೆಗೆ ಹೋದಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಾರದ ಮುನಿಗಳು ದಟ್ಟ ಅರಣ್ಯದಲ್ಲಿ ಚಲಿಸುವಾಗ ಭೇಟೆ ಯಾಡಲು ರತ್ನಾಕರ ಸಕಲ ಸಿದ್ದತೆಯಿಂದ ಹೊರಟಾಗ ನಾರದ ಮುನಿಗಳು ನೀನೂ ಒಳ್ಳೆಯ ಹೃದಯವಂತ ಉತ್ತಮವಾದವ ಯಾಕೆ ನೀ ಇಂತಹ ಪಾಪದ ಕೆಲಸದಲ್ಲಿ ತೊಡಗಿದಿಯಾ ಅಂತ ಪ್ರಶ್ನಿಸಿದಾಗ ನಮ್ಮ ಸಂಸಾರ, ಜೀವನ ನಡೆಸುವುದಕ್ಕಾಗಿ ಅಂತ ಉತ್ತರಿಸಿದಾಗ ನಾರದ ಮುನಿಗಳು ನಿನ್ನ ಸುಖ ದುಃಖದಲ್ಲಿ ನಿನ್ನ ಕುಟುಂಬದವರು ಭಾಗಿಯಾಗುತ್ತಾರ ಎಂದು ಪ್ರಶ್ನಿಸಿದಾಗ ಮೌನ ಮುರಿದ ರತ್ನಾಕರ, ಮನೆಗೆ ಹೋಗಿ ತನ್ನ ಕುಟುಂಬದವ ರೊಡನೆ ಇದರ ಬಗ್ಗೆ ಚರ್ಚಿಸಿದ ಅವರು ನಿರಾಕರಿಸಿದರು ಮತ್ತೆ ಮುನಿಗಳತ್ತ ಬಂದ ರತ್ನಾಕರ ಬಹು ದುಖಃದಿಂದ ಹೇಳಿದ ಆಗ ನಾರದ ಮುನಿಗಳು ಭಗವಾನ್ ಶ್ರೀ ರಾಮ ನಾಮ ಜಪಿಸಲು ಹೇಳಿದರು ಆದ್ರೆ ಅವನ ಬಾಯಿಯಲ್ಲಿ ರಾಮ ನಾಮ ಬಾರದ ಕಾರಣ ಅವನಿಗೆ ಮರ, ಮರ ಎಂದು ಜಪಿಸು ಅಂತ ಹೇಳುತ್ತಾರೆ, ಸ್ವತಃ ತಾವೇ ಒಂದು ಮರದ ಕೆಳಗೆ ಕುಳಿತು ಅದರ ಮೇಲೆ ದೊಡ್ಡಾಕಾರದ ಹುತ್ತು ಬೆಳೆದು ಸತತ ಪ್ರಯತ್ನದಿಂದ ರಾಮನಾಮ ಜಪಿಸಲಿಕ್ಕೆ ಬಂತು ಮುಂದೆ ಅವರೇ ವಾಲ್ಮೀಕಿ ಮಹರ್ಷಿಗಳಾಗಿ ರಾಮಾಯಣ ರಚಿಸಿದರು.ಈಗೆ ನಮ್ಮ ಜೀವನದಲ್ಲಿ ಅನೇಕ ರೀತಿಯ ದುಖಃ, ಕಂಟಕ ಬಂದಾಗ ಪ್ರಭು ಶ್ರೀ ರಾಮಚಂದ್ರನ ನಾಮ ಸ್ಮರಣೆ ಮಾಡಿದರೆ ಸಾಕು ಬಂದ ಕಂಟಕ ದೂರವಾಗಿ ನಮ್ಮ ಜೀವನ ಪಾವನವಾಗುತ್ತೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಂಕರ ಕಿಲೆದಮನಿ, ಕಲ್ಲಪ್ಪ ಭೋವಿ, ದೌಲಾತ್ರಯ ನೀಲಕೋಡ್, ಗುಂಡೇಶ,ಪರಶುರಾಮ್, ಸಾಬಣ್ಣ, ಧರ್ಮರಾಜ ಮತ್ತು ವಿವಿಧ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ನೀಲಕೋಡ್.ಇಜೇರಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button