ಕಲಕೇರಿ ಹೋಬಳಿ ಮಟ್ಟದ ವ್ಯಾಪ್ತಿಯಲ್ಲಿ ಒಳಪಡುವ ಎಲ್ಲಾ ಗ್ರಾಮಗಳಿಗೆ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ವಿಮೆ ಹಾಗೂ ರೈತರ ಹಣ ಬಿಡುಗಡೆಗಾಗಿ – ಆಗ್ರಹಿಸಿ ರೈತರಿಂದ ಮನವಿ.
ತಾಳಿಕೋಟೆ ಏ.06

ರಾಷ್ಟ್ರೀಯ ರೈತ ಸಂಘ ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಒಕ್ಕೂಟದಿಂದ ಕಲಕೇರಿ, ಅಸ್ಕಿ, ಭಂಟನೂರ, ಬೇಕಿನಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಳಪಡುವ ಎಲ್ಲಾ ಗ್ರಾಮಗಳ ರೈತರುಗಳಿಗೆ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ ಬೆಳೆ ವಿಮೆ ಹಂಚಿಕೆ ಯಾಗಿರುವುದಿಲ್ಲಾ ಕೃಷಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೆಳೆ ವಿಮಾ ಅಧಿಕಾರಿಗಳು ಸೇರಿ ಬೆಳೆ ಕಟಾವು ಮಾಡಿದ ವಿವರ ಎಂದು ಯಾವ ಅಧಿಕಾರಿಗಳ ಸಮ್ಮಖದಲ್ಲಿ ಬೆಳೆ ಕಟಾವು ಪ್ರಯೋಗ ಮಾಡಿರುತ್ತಾರೆ ಮತ್ತು F1, F2, GPS ಮಾಡಿದ ರೈತರ ಜಮೀನುಗಳಲ್ಲಿ ವಿವರ ದಾಖಲು ಮಾಡಿರುತ್ತಾರೆ ಹಾಗೂ ಬೆಳೆ ಕಟಾವು ಮಾಡಿದ ಪ್ರಯೋಗದಲ್ಲಿ ಭಾಗವಹಿಸಿದ ಎಲ್ಲಾ ಸಂಭಂದಪಟ್ಟ ಅಧಿಕಾರಿಗಳನ್ನು ತಹಶೀಲದಾರ ಕಾರ್ಯಲಯಕ್ಕೆ ಕರೆಸಿ ಅಧಿಕಾರಿಗಳನ್ನು ರೈತರ ಸಮ್ಮುಖದಲ್ಲಿ ವಿಚಾರಣೆ ಮಾಡಿಸಬೇಕು ಅಂತಾ ಮಾನ್ಯ ತಹಶೀಲದಾರ ಹಾಗೂ ತಾಲೂಕ ದಂಡಾಧಿಕಾರಿಗಳು ಇವರಲ್ಲಿ ಮನವಿ ಮಾಡಿ ಕೊಳ್ಳುತ್ತವೆ. ಒಂದು ವೇಳೆ ಪ್ರಧಾನ ಮಂತ್ರಿ ಫಸಲು ಭೀಮಾ ಹಣ ಬೆಳೆ ವಿಮೆ ಪರಿಹಾರದ ಹಣ ಬರೆದ್ದಿದರೆ ನಿಮ್ಮ ತಾಲೂಕ ತಹಶೀಲದಾರ ಕಾರ್ಯಾಲದ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು.

ಮತ್ತು ಇಲ್ಲಿಯವರೆಗೆ ಸನ್ 2022-23 ನೇ. ಮತ್ತು 2023-24 ಹಾಗೂ 2024-25 ನೇ. ಸಾಲಿನ ವರೆಗೆ ಬೆಳೆ ವಿಮಾ ತುಂಬುತ್ತಾ ಬಂದಿರುತ್ತವೆ. ಕಾರಣ ಬೆಳೆ ಕಟಾವು ಪ್ರಯೋಗದಲ್ಲಿ ಕೃಷಿ ಇಲಾಖೆ ಮತ್ತು ಗ್ರಾಮ ಪಂಚಾಯತದ ಅಧಿಕಾರಿಗಳು ಸೇರಿ ಈ ಮೇಲೆ ತಿಳಿಸಿದ ಎಲ್ಲಾ ಗ್ರಾಮ ಪಂಚಾಯತದ ಹಳ್ಳಿಗಳಿಗೆ ಬೆಳೆ ವಿಮೆ ಬಂದಿರುವುದಿಲ್ಲ. ಒಂದು ವೇಳೆ ಕಲಕೇರಿ ಹೋಬಳಿ ಮಟ್ಟದಿಂದ ತಾಲೂಕ ತಹಶೀಲದಾರ ಕಾರ್ಯಲಯದ ವರೆಗೆ ಕಾಲ್ನಡಿಗೆ ಜಾಥಾ ಮುಖಾಂತರ ಉಗ್ರವಾದ ಹೋರಾಟ ಮಾಡಲಾಗುವುದು. ತಾವುಗಳು ಮುಂದಿನ ಹೋರಾಟಕ್ಕೆ ಅಣಿ ಮಾಡಿ ಕೊಡದೆ ನಮಗೆ ನ್ಯಾಯ ಕೊಡಿಸುತ್ತೀರಿ ಎಂದು ಸಮಸ್ತ ರೈತರು ತಮ್ಮಲ್ಲಿ ಭರವಸೆ ಮಾಡಿರುತ್ತೇವೆ ಎಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಗಳಾದ ರೇಣುಕಾ ಪಾಟೀಲ್. ಜಿಲ್ಲಾ ಅಧ್ಯಕ್ಷರು ಹಣಮಂತ ವಡ್ಡರ್. ಜಿಲ್ಲಾ ಉಪಾಧ್ಯಕ್ಷರಾದ ಮೈಬೂಬಬಾಷ.ಮನಗೂಳಿ. ತಾಲೂಕ ಅಧ್ಯಕ್ಷರು ಅಶೋಕ್ ಗೌಡ ಪಾಟೀಲ್. ಮೋರ್ಚಾ ಅಧ್ಯಕ್ಷರು ಗೌಡಪ್ಪ ಗೌಡ ಹಳಿಮನಿ. ಯಂಕಣ್ಣ ಗುತ್ತೆಹಾಳ. ಸಂಗನಗೌಡ ಬಿರಾದಾರ. ಶರಣಗೌಡ ಬಿರಾದಾರ. ಬಸವರಾಜ್ ದೇಸಾಯಿ. ರಾಮರಾವ್ ದೇಶಮುಕ್. ರುದ್ರು ಗುಮಶೆಟ್ಟಿ. ಬಸವರಾಜ್ ದೇಸಾಯಿ. ಚಂದ್ರಶೇಖರ್ ಸುಂಕದ. ಅಶೋಕ್ ನಾವಿ. ಈರಣ್ಣ ಆಲಗೂರ್. ಶರಣು ಕೌದಿ. ಗುರು ಕಡಕೋಳ. ಬಸನು ಮಾಡಬಾಳ್ ಇನ್ನಿತರರು ಈ ಮೂಲಕ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ