ವಿವಿಧ ಸಂಘಟನೆ ಗಳಿಂದ ಕಲಕೇರಿ ವಲಯ ಮಟ್ಟದ ವಿವಿಧ ಬೇಡಿಕೆಗಳ ಈಡೇರಿಕೆಗೆ – ಆಗ್ರಹಿಸಿ ಮನವಿ ಸಲ್ಲಿಕೆ.

ಕಲಕೇರಿ ಏ.07

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ, ಬಿ.ಕೃಫ್ಣಪ್ಪ ಬಣ) ಕಲಕೇರಿ ವಲಯ ಶಾಖೆ ನೇತೃತ್ವದಲ್ಲಿ ತಾಳಿಕೋಟಿ ತಾಲೂಕಿನ ಕಲಕೇರಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ನಾಗರಿಕರ ಅನಕೂಲಕ್ಕಾಗಿ ವಿವಿಧ ಬೇಡಿಕೆಗಳನ್ನು ಅನುಷ್ಠಾನ ಗೊಳಿಸುವ ಕುರಿತು ಪ್ರತಿಭಟನೆ.ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾದವು ಮತ್ತು ದೇಶಕ್ಕೆ ಸಂವಿಧಾನ ಜಾರಿಯಾಗಿ 75 ವರ್ಷ ಗತಿಸಿದವು ಅದರೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ಸಮಸ್ಯೆಗಳು ಹೆಚ್ಚಾದವು ಹೊರತಾಗಿ ಕಡಿಮೆ ಆಗಲಿಲ್ಲ. ಈಗ ಆಡಳಿತ ನಡೆಸುತ್ತಿರುವ ತಾಲೂಕಾ ಆಡಳಿತದ ವ್ಯವಸ್ಥೆಯನ್ನು ಖಂಡಿಸಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಲಯ ಶಾಖೆ ಕಲಕೇರಿ ಹಾಗೂ ವಿವಿಧ ಸಂಘಟನೆಗಳ ಪ್ರಗತಿಪರ ಹೋರಾಟಗಾರರು, ರೈತ ಪರ ಹೋರಾಟಗಾರರ ನೇತೃತ್ವದಲ್ಲಿ ಕಲಕೇರಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಪೊಲೀಸ್ ಠಾಣೆಯ ಮಾರ್ಗವಾಗಿ ಬಸ್ ನಿಲ್ದಾಣದಲ್ಲಿ ಸಭೆ ಸೇರಿ ಸದರಿ ನ್ಯಾಯಯುತವಾದ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆಗಳನ್ನು 10 ದಿವಸಗಳ ಒಳಗಾಗಿ ನೇರವೆರಿಸಿ ಕೊಡಬೇಕು. ಒಂದು ವೇಳೆ ಬೇಡಿಕೆ ಈಡೇರದಿದ್ದ ಪಕ್ಷದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಉಗ್ರ ಸ್ವರೂಪದ ಪ್ರತಿಭಟನಾ ರ್ಯಾಲಿ ಮಾಡುವುದಾಗಿ ಎಚ್ಚರಿಸಿದರು.

ಬೇಡಿಕೆಗಳು:-

1. ತಾಳಿಕೋಟಿ ತಾಲೂಕಿನ ಕಲಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಮಂಜೂರಾತಿ ಮಾಡಬೇಕು.

2. ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಡಿಯಲ್ಲಿ ರೈತರ ಜಮೀನುಗಳ ಅನಕೂಲಕ್ಕಾಗಿ 240 ಹೊಸದಾಗಿ ನೀರಿನ ಶೇಖರಣಾ ಘಟಕಗಳು (ಟ್ರಯಲ್ ರನ್ ಪಾರ್ಕ್ ಗಳು) ಮಂಜೂರಾಗಿದ್ದು ಕೂಡಲೇ ಕೆಲಸ ಪ್ರಾರಂಭಿಸಬೇಕು.

3. ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಅನಕೂಲಕ್ಕಾಗಿ 108 ಅಂಬುಲೆನ್ಸ್ ಸೇವೆಯನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು.

4. ಕಲಕೇರಿ ಗ್ರಾಮ ಪಂಚಾಯತಿಗೆ ವಿವಿಧ ವಸತಿ ಯೋಜನೆಡಿಯಲ್ಲಿ 450 ಮನೆಗಳ ಮಂಜೂರಾಗಿದ್ದು ಕೂಡಲೇ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಸಿ ಮಂಜೂರು ಮಾಡಬೇಕು.

5. ಹುಣಶ್ಯಾಳ ಕೆರೆ ನೀರು ತುಂಬುವ ಯೋಜನೆಡಿಯಲ್ಲಿ ಅಂದಾಜು 5.5 ಕೋಟಿ ಮಂಜೂರಾಗಿ ಕೆರೆ ತುಂಬುವ ಕೆಲಸ ಪೂರ್ಣ ಗೊಳಿಸಬೇಕು.

ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಣುಕಾ ಪಾಟೀಲ್. ಅಶೋಕ್ ಗೌಡ ಪಾಟೀಲ್. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಲಕ್ಕಪ್ಪ ಬಡಿಗೇರ, ಶರಣು ಸಿಂಧೆ, ಹಣಮಂತ ವಡ್ಡರ, ಲಕ್ಷ್ಮಣ್ ಹೊಸಮನಿ,ಅನೀಲ ಬಡಿಗೇರ, ಅಶೋಕ್ ಗುಡಿಸಲಮನಿ, ಶ್ರೀಶೈಲ ಜಾಲವಾದ , ಅಕ್ಬರ್ ಬನ್ನೇಟ್ಟಿ, ಮಹಾದೇವ ಲಿಂಗದಳ್ಳಿ,ಸೋಮು ನೀರಲಗಿ,ದಾನೇಶ ಕೇಸರಿ,ಮಾಂತು ಸಂದಿಮನಿ, ಶೀವು ಹೊಸಮನಿ, ಉಮೇಶ್ ಬಡಿಗೇರ,ಚಂದ್ರು ಬಡಿಗೇರ,ಕಾಸೀಮ್ ನಾಯ್ಕೊಡಿ, ಶರಣು ಕೌದಿ. ಗೌಡಪ್ಪ ಗೌಡ ಹಳೆಮನೆ. ವಾಗೀಶ್ ನಾಗಠಾಣ್. ಸಾಯಬಣ್ಣ ನೀರಲಗಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಪದಾಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button