ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ – ಪ್ರಶಸ್ತಿಗೆ ಆಯ್ಕೆ.
ಮೈಸೂರು ಏ.07

ಕೆ.ಸುಭಾಷ್ ಚಂದ್ರ ಸಮಾಜ ಸೇವೆ, ಸಂಗೀತ ಮಠಪತಿ ಶಿಕ್ಷಣ ಕ್ಷೇತ್ರ, ಮಾದೇವಿ ಪ್ರಸಾದ್ ಸಮಾಜ ಸೇವೆ, ರಮ್ಯಾಚೆಲುವ ಮೂರ್ತಿ ನೃತ್ಯ ಶಿಕ್ಷಕರು, ವಿದುಷಿ ಶ್ರೀ ಅಶ್ವಿನಿ ಜೆ ಗುರು ನೃತ್ಯ ಶಿಕ್ಷಕಿ, ಸೇವೆಯನ್ನು ಪರಿಗಣಿಸಿ ಅವರನ್ನು ಈ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಮೈಸೂರಿನ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನೀಡುವ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಏ.10 ರಂದು ಗುರುವಾರ ನಡೆಯಲಿರುವ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಕರ್ನಾಟಕ ಸಾಂಸ್ಕೃತಿಕ ವೈಭವ-2025 ನೇ. ಸಾಲಿನ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಿದ್ದಾರೆ. ಎಂದು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ಕರ್ನಾಟಕ ಕಾರ್ಯದರ್ಶಿ ಡಾ, ಶಿವಣ್ಣ.ಜಿ ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್. ಕೆ.ಹೊಸಹಳ್ಳಿ