ಚಿಟಗಿನ ಕೊಪ್ಪದಲ್ಲಿ ಎನ್.ಎಸ್.ಎಸ್ – ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗಿ.
ಬೇವೂರ ಏ. 09

ಬೇವೂರಿನ ಪಿ.ಎಸ್.ಎಸ್ ಕಾಲೇಜು ವತಿಯಿಂದ ಎನ್.ಎಸ್.ಎಸ್ ವಾರ್ಷಿಕ ಶಿಬಿರವನ್ನು ಚಿಟಗಿನ ಕೊಪ್ಪ ಗ್ರಾಮದಲ್ಲಿ ಹಮ್ಮಿ ಕೊಳ್ಳಲಾಗಿದ್ದು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿ.ಜಿ ಮಾಗನೂರ ವಹಿಸಿ ಕೊಳ್ಳುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಗಲಕೋಟೆಯ ಶಾಸಕರಾದ ಎಚ್.ವಾಯ್ ಮೇಟಿಯವರು ನೆರವೇರಿಸುವರು. ಕಾಲಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಮೀನಗಡದ ಪಿ.ಎಸ್.ಐ ಶ್ರೀಮತಿ ಜ್ಯೋತಿ ವಾಲೀಕಾರ, ಅತಿಥಿಗಳಾಗಿ ವಾಯ್.ಎಚ್ ಬೆನಕನವಾರಿ, ಮುತ್ತು ಕೆ.ಬಡಿಗೇರ ಭಾಗವಹಿಸುವರು. ಏಳು ದಿನಗಳ ವರೆಗೆ ಜರುಗುವ ಈ ಶಿಬಿರದಲ್ಲಿ ಮಹಾ ವಿದ್ಯಾಲಯದ 50 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗಿಯಾಗುವರು ಎಂದು ಪ್ರಾಚಾರ್ಯರಾದ ಡಾ, ಜ.ಗು ಭೈರಮಟ್ಟಿ, ಶಿಬಿರದ ಯೋಜನಾ ಅಧಿಕಾರಿಗಳಾದ ಜಿ.ಎಸ್ ಗೌಡರ ಅವರು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.