ನಿಧನ ವಾರ್ತೆ:ಶ್ರೀ ಮತಿ ಭಜನೆ ಹನುಮವ್ವ – ಅನಾರೋಗ್ಯ ದಿಂದ ನಿಧನ.
ಕೂಡ್ಲಿಗಿ ಏ.09

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 14 ನೇ. ವಾರ್ಡಿನ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ನಗರದ ನಿವಾಸಿಗಳಾದ ಭಜನೆ ಹನುಮವ್ವ (75) ಮಂಗಳವಾರ ರಂದು ರಾತ್ರಿ 8.30 ಘಂಟೆಗೆ ಸ್ವ ಗೃಹದಲ್ಲಿ ಸುಮಾರು ಮೂರರಿಂದ ನಾಲ್ಕು ವರ್ಷಗಳಿಂದ ಅನಾರೋಗ್ಯ ದಿಂದ ಹಾಸಿಗೆಯಲ್ಲಿ ಬಳಲುತ್ತಿದ್ದು 08/04/2025 ರಂದು ನಿಧನರಾಗಿದ್ದಾರೆ. ಇವರು ಪತಿಯಾದ ಭಜನೆ ಚೌಡಪ್ಪ ಇವರು ಹೆಸರಾಂತ ಭಜನಾ ಕಲಾವಿದ ರಾಗಿರುವುದರಿಂದ ಚೌಡಪ್ಪ ಇವರ ಧರ್ಮ ಪತ್ನಿಯಾದ ಭಜನೆ ಹನುಮವ್ವ ಇವರು ನಿಧನ ಹೊಂದಿದ್ದು, ಇವರಿಗೆ 3 ಜನ ಗಂಡು ಮಕ್ಕಳು ಹಾಗೂ 3 ಜನ ಹೆಣ್ಣು ಮಕ್ಕಳಿದ್ದು ಮೊಮ್ಮಕ್ಕಳು ಸೇರಿದಂತೆ, ಅಳಿಯಂದಿರು, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅಂತ್ಯಕ್ರಿಯೆ – ಏಪ್ರಿಲ್ -09-04-2025 ಬುಧವಾರ ರಂದು 12 ಘಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿ ನಗರದ ಪಕ್ಕದಲ್ಲಿ ಬರುವ ಶಾಂತಿ ವನದಲ್ಲಿ ಅಂತ್ಯಕ್ರಿಯೆ ನೆರವೇರಿಸ ಲಾಗುವುದು. ಸಂತಾಪ – ಕೂಡ್ಲಿಗಿ, ಪಟ್ಟಣದ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಸಂಘ ಹಾಗೂ ಮಾದಿಗ ದಂಡೋರ ಸಂಘ ಹಾಗೂ ದಲಿತ ಸಮುದಾಯದ ಮುಖಂಡರುಗಳು, ಸಂಬಂಧಿಕರು ಹಾಗೂ ವಿವಿದ ಸಮುದಾಯದವರು ಪಟ್ಟಣದ ಸಮಸ್ತ ಗ್ರಾಮಸ್ಥರು. ಸೇರಿದಂತೆ ವಿವಿಧ ಸಮುದಾಯದವರು. ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು ಹಾಗೂ ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಕೂಡ್ಲಿಗಿ ಪಟ್ಟಣ ಸೇರಿದಂತೆ ನೆರೆ ಹೊರೆ ಸಂಬಂದಿಕರು ಗ್ರಾಮಸ್ಥರು. ಇವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ