ರಾಷ್ಟೀಯ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ದಿಂದ – ಪಾದಯಾತ್ರೆ ಕಾರ್ಯಕ್ರಮಕ್ಕೆ ಕರೆ.
ತಾಳಿಕೋಟೆ ಏ.09

ತಾಳಿಕೋಟಿ ತಾಲೂಕಿನ ಕಲಕೇರಿ ಹೋಬಳಿ ಮಟ್ಟದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ಬರುವ ಹಳ್ಳಿಗಳಿಗೆ 2024.2025 ನೇ. ಸಾಲಿನ. ಫಸಲ್ ಭೀಮಾ ಯೋಜನೆ ಬೆಳೆ ವಿಮ ಹಾಗೂ ರೈತರ ಪರಿಹಾರ ಬರದಿದ್ದ ಕಾರಣಕ್ಕೆ ಕಲಕೇರಿಯಿಂದ ಶ್ರೀ ಗುರು ವೀರಘಂಟಿ ಮಡಿವಾಳೇಶ್ವರ ದೇವಸ್ಥಾನ ದಿಂದ ವಿಜಯಪುರ ಜಿಲ್ಲಾ ಕಚೇರಿಗೆ ಪಾದಯಾತ್ರೆ ರೈತರಿಂದ ನಡೆಯುವುದು ದಿನಾಂಕ 20.4.2025 ರಿಂದ ಬೆಳಿಗ್ಗೆ 8:00 ಗಂಟೆಗೆ ಪಾದಯಾತ್ರೆ ಪ್ರಾರಂಭ ಕೈಗೊಂಡು ವಿಜಯಪುರ ಜಿಲ್ಲಾ ಕಚೇರಿ ವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಎಲ್ಲಾ ರೈತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಮ್ಮ ಬೇಡಿಕೆಯನ್ನು ಈಡೇರವರಿಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಈ ಸಂದರ್ಭದಲ್ಲಿ ರೈತರು ತಿಳಿಸಿದರು. ಹಸಿರೇ ಉಸಿರು. ಜೈ ಜವಾನ್ ಜೈ ಕಿಸಾನ್. ಈ ದೇಶದ ಶಕ್ತಿ ರೈತರು ಎನ್ನುವುದು ಸರಕಾರಕ್ಕೆ ತೋರಿಸಬೇಕು ರೈತ ಈ ದೇಶದ ಬೆನ್ನೆಲುಬು ಎನ್ನುವುದು ಸರಕಾರಕ್ಕೆ ತೋರಿಸಬೇಕು ಜಗತ್ತಿನಲ್ಲಿ ರೈತ ಬೆಳೆದರೆ ನಮಗೆಲ್ಲಾ ಅನ್ನ ಎನ್ನುವುದು ಸರಕಾರಿ ಅಧಿಕಾರಿಗಳು ರಾಜಕಾರಣಿಗಳು ಮರೆತಿದ್ದಾರೆ.

ರೈತ ಏನು ಬೆಳೆಯಲಿಲ್ಲ ವೆಂದರೆ ಜಗತ್ತಿನಲ್ಲಿ ಯಾರೋ ಉಳಿಯುವುದಿಲ್ಲ ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳು ಮೊದಲು ನೀವು ರೈತರಿಗೆ ಗೌರವ ಕೊಡಿ. 20.4.25 ತಾರೀಖಿನ ಒಳಗೆ ನಮ್ಮ ತಾಳಿಕೋಟಿ ತಾಲೂಕಿನ ಕಲಕೇರಿ ಹೋಬಳಿ ಮಟ್ಟದಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ಬರುವಂತ ಹಳ್ಳಿಗಳಿಗೆ ಫಸಲ್ ಭೀಮಾ ಯೋಜನೆ ಬೆಳೆ ವಿಮ ಹಾಗೂ ರೈತರ ಪರಿಹಾರ ರೈತರಿಗೆ ಬರುವಂತೆ ಮಾಡಬೇಕು ಹಾಗೂ ಬೆಕಿನಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವಂತ ಹಳ್ಳಿಗಳಿಗೆ ಫಸಲ್ ಭೀಮಾ ಯೋಜನೆ ಬೆಳೆ ಪರಿಹಾರ ಬೆಳೆ ವಿಮ ಬರಬೇಕು ಇಲ್ಲದಿದ್ದರೆ ನಮ್ಮ ರೈತರ ಪಾದಯಾತ್ರೆ ವಿಜಯಪುರ ಜಿಲ್ಲಾ ಕಚೇರಿವರೆಗೂ ನಡೆಯುವುದು ಎಂದು ಈ ಸಂದರ್ಭದಲ್ಲಿ ರೈತರು ಹೇಳಿ ನಾಳೆ ದಿನ ರೈತರೆಲ್ಲರೂ ಜಮಾವಣೆ ಗೊಳ್ಳುಲು ರೈತರಿಂದ ಕರೆ ಆಗಿದೆ. ಈ ಸಂದರ್ಭದಲ್ಲಿ ಪಾಲ್ಗೊಂಡ ರೈತರು. ರಾಷ್ಟ್ರೀಯ ರೈತರ ಸಂಘ. ಕರ್ನಾಟಕ ರಾಜ್ಯ ರೈತ ಸಂಘ & ಕಬ್ಬು ಬೆಳೆಗಾರರ ಒಕ್ಕೂಟ. ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ್. ಜಿಲ್ಲಾ ಅಧ್ಯಕ್ಷರಾದ ಹಣಮಂತ ವಡ್ಡರ್. ಜಿಲ್ಲಾ ಉಪಾಧ್ಯಕ್ಷರಾದ ಮೖಬೂಬಬಾಷ ಮನಗೂಳಿ. ತಾಲೂಕ ಅಧ್ಯಕ್ಷರಾದ ಅಶೋಕ್ ಗೌಡ ಪಾಟೀಲ್. ಯುವ ಮೋರ್ಚಾ ಅಧ್ಯಕ್ಷರಾದ ಗೌಡಪ್ಪಗೌಡ ಹಳಿಮನಿ. ಈ ಎಲ್ಲಾ ರೈತರ ಮುಖಂಡರ ನೇತೃತ್ವದಲ್ಲಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ