ಮಾನ್ವಿ ತಾಲೂಕ ಪಂಚಾಯತಿ ಇಒ ಖಾಲಿದ್ ಅಹ್ಮದ್ – ಆಡಳಿತ ಠುಸ್ ಪಟಾಕಿ.
ಮಾನ್ವಿ ಏ.10

ಮಾನ್ವಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ಧೋರಿದ್ದು. ಇದನ್ನು ಸಂಪೂರ್ಣವಾಗಿ ನಿಭಾಯಿಸ ಬೇಕಾದ ತಾಲೂಕ ಪಂಚಾಯತಿ ಇ.ಓ ಖಾಲಿದ್ ಆಡಳಿತ ಠುಸ್ ಪಟಾಕಿ ಆಗಿದೆ ಎಂದು ರೈತ ಸಂಘದ ತಾಲೂಕ ಅಧೊ ಬಸವರಾಜ ನಾಯಕ ಆರೋಪಿಸಿದ್ದಾರೆ.
ಮಾನ್ವಿ ತಾಲೂಕಿನ ನಾನಾ ಗ್ರಾಮಗಳಲ್ಲಿ ನೀರಿಗಾಗಿ ಜನರು ಪರಿ ತಪಿಸುತ್ತಿದ್ದಾರೆ. ಆದರೆ ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸದ ಕಾರಣ ಜನರಂತು ಹೀನಾಯ ಬದುಕಿನಲ್ಲಿ ಜೀವನ ಕಳೆಯುತ್ತಿದ್ದಾರೆ.
ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರು ಮಾತ್ರ ಗ್ರಾಮೀಣ ಭಾಗದ ಸಮಸ್ಯೆ ಅರಿಯದೆ ತಾಲೂಕ ಪಂಚಾಯತಿ ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ವಿನಾಃ ಬಡವರು ನೀರಿಲ್ಲದೆ ಸತ್ತರು ಸಹ ಕಿಂಚಿತ್ತು ಕಾಳಜಿ ಇಲ್ಲವಾಗಿದೆ. ಇ.ಓ ಖಾಲಿದ್ ಅಹ್ಮದ್ ಅವರಿಗೆ ಬಡ ಜನರ ಶಾಪ ತಟ್ಟೋದು ಮಾತ್ರ ಗ್ಯಾರಂಟಿ ಆಗಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಪಿಸು ಮಾತುಗಳಿಂದ ಅಲ್ಲಲ್ಲಿ ಕೇಳಿ ಬರುತ್ತಿರುವುದು ಸಾಮಾನ್ಯ ಸಂಗತಿಯಂತೆ ಆಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ