ತೊಗರಿ ಬೆಳೆ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಆಗ್ರಹಿಸಿ – ನಾದ ಕೆ.ಡಿ ಯಲ್ಲಿ ಕರವೇ ಪ್ರತಿಭಟನೆ.
ನಾದ ಕೆ.ಡಿ ಏ.10

ಇಂಡಿ ತಾಲೂಕಿನಲ್ಲಿ ತೊಗರಿ ಬೆಳೆ ಬೆಳೆದ ರೈತರು ಸಂಕಷ್ಟ ದಲ್ಲಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಹಾಗೂ ಮಂಜಿನ ವಾತಾವರಣ ದಿಂದ ತೊಗರಿ ಬೆಳೆ ಸಂಪೂರ್ಣ ಕೈ ಕೊಟ್ಟಿದೆ. ಅದಲ್ಲದೇ ಈ ಬಾರಿ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ಇಳುವರಿ ಕುಂಠಿತವಾಗಿದ್ದು. ಅಂತಹ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ದಿಂದ ಭೀಮಾ ನದಿಗೆ ನೀರು ಹರಿಸಬೇಕು.19 ರ ಕಾಲುವೆ (ನಾದ ಕೆ.ಡಿ) ಮರು ಸ್ಥಾಪಿಸಿ ನೀರು ಹರಿಸಬೇಕು ಎಂದು ಕರವೇ ಪದಾಧಿಕಾರಿಗಳು ಹಾಗೂ ಸುತ್ತ ಮುತ್ತಲಿನ ರೈತರು ಗ್ರಾಮಸ್ಥರು ಸೇರಿ ಕೊಂಡು ನಾದ ಕೆ.ಡಿ ಬಸ್ ನಿಲ್ದಾಣದ ಸಮೀಪ ಶಾಂತಿಯುತವಾಗಿ ಬೃಹತ್ ಪ್ರತಿಭಟನೆ ಮಾಡಿದರು. ನಂತರ ತಾಲೂಕಿನ ಉಪ ತಹಸೀಲ್ದಾರ್ ರಾದ ಆರ್.ಬಿ ಮೋಗಿಯವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ರಾಜಕುಮಾರ ಪಾಟೀಲ. ಅನೀಲಗೌಡ ಅಳ್ಳಗಿ. ಕಿರಣಕುಮಾರ ಕೆರುಟಗಿ. ಆಸೀಫ್ ನದಾಫ. ಸಿದ್ಧಾರಾಮ ತಳವಾರ. ಪೈಗಂಬರ ದೇಸಾಯಿ. ಅಜೀಜ್ ದೇಸಾಯಿ ಬಸವರಾಜ ಲಾಳಸಂಗಿ. ಎಮ್.ಎಸ್ ಮುಲ್ಲಾ. ಶರಣಗೌಡ ಬಂಡಿ. ಅಂಬುರಾಯ ಕೌಟಗಿ. ದಾದು ಮುಲ್ಲಾ. ರಫೀಕ ವಾಲಿಕಾರ. ರಾಜು ನದಾಫ. ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ