ಕಾಶಿಫಾ ತಜರಿನ್ ವಿಜ್ಞಾನ ವಿಭಾಗದಲ್ಲಿ – ತಾಲೂಕಿಗೆ ಪ್ರಥಮ.
ಮಾನ್ವಿ ಏ.12

ಮಾನ್ವಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹೆಬೂಬ್ ಖುರೇಷಿ ಅವರು ಸಾಮಾಜಿಕ ಕಾರ್ಯ ಮಾಡುವುದರ ಜೊತೆಗೆ ವಿಜ್ಞಾನ ವಿಭಾಗದಲ್ಲಿ ಮಾನ್ವಿ ತಾಲೂಕಿಗೆ ಪ್ರಥಮ ಶ್ರೇಯಾಂಕ ಪಡೆದ ಕಾಶಿಫಾ ತಜರಿನ್ ಅವರನ್ನು ಟಿಪ್ಪು ಸುಲ್ತಾನ್ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನೆಲೆಸಿರುವ ಎ.ಕೆ ಜಾಗಿರದಾರ್ ಕುಟುಂಬದಲ್ಲಿ ಕಾಶಿಫಾ ತಜರಿನ್ ರಾಯಚೂರು ಜಿಲ್ಲೆಗೆ 3 ನೇ. ಶ್ರೇಯಾಂಕ ಬಂದಿದ್ದರಿಂದ ಒಂದು ರೀತಿಯಲ್ಲಿ ಖುಷಿಯ ವಾತವರಣ ಮೂಡಿ ಬಂದಿದೆ.ಸೋಲು ಗೆಲುವಿನ ಮೆಟ್ಟಿಲು ಆದರೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದಕ್ಕೂ ಎದುರದೆ ಮನಸ್ಸು ಗಟ್ಟಿ ಮಾಡಿ ಕೊಂಡು ನಿರಂತರ ಅಧ್ಯಯನ ಮಾಡಿದರೆ ಹೆಚ್ಚು ಅಂಕ ಗಳಿಸಲು ಸಾಧ್ಯ. ಆದರೆ ಅನಾಹುತ ಮಾಡಿ ಕೊಳ್ಳುವ ಹಂತಕ್ಕೆ ಹೋಗ ಬಾರದು ಎಂದು ಬುದ್ಧಿಜೀವಿ ಜೆ.ಹೆಚ್ ದೇವರಾಜು ಸಲಹೆ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ