ಬಸರಕೋಡ್ ಪವಾಡ ಬಸವೇಶ್ವರ – ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭ.
ಬಸರಕೋಡ್ ಏ.13

ಮುದ್ದೇಬಿಹಾಳ ತಾಲೂಕಿನ ಬಸರಕೋಡ್ ಗ್ರಾಮದ ಶ್ರೀ ಪವಾಡ ಬಸವೇಶ್ವರ ಜಾತ್ರಾ ಮಹೋತ್ಸವ ಏಪ್ರಿಲ್ 13 ರಿಂದ 17 ರವರೆಗೆ ನಡೆಯಲಿದೆ. 13 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಪವಾಡ ಬಸವೇಶ್ವರ ಮೂರ್ತಿಗೆ ಅಭಿಷೇಕ 9 ಗಂಟೆಗೆ ದೇವಸ್ಥಾನದ ಕಳಸೋಸ್ತವ ಪಲ್ಲಕ್ಕಿ ಕುಂಭಮೇಳ 9:30 ಗಂಟೆಯಿಂದ ಶಿವ ಭಜನೆ ಮದ್ಯಾಹ್ನ 1 ಗಂಟೆಗೆ ಟ್ಯಾಕ್ಟರ್ ಹಿಂಬದಿ ಬಲ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 4. ಗಂಟೆಗೆ ನಿಡಗುಂದಿ ಯಿಂದ ತೇರಿನ ಕಳಸ ಮತ್ತು ಬೆಳ್ಳಿಯ ಛತ್ರಿ ಬರುವುದು ಮತ್ತು ಕಾಶಿನಕುಂಟಿ ಗ್ರಾಮದಿಂದ ಪಲ್ಲಕ್ಕಿ ಬರುವುದು. ರಾತ್ರಿ 10 ಗಂಟೆಗೆ ಗೀಗೀ ಪದಗಳು ಜರುಗುವುದು. ಏಪ್ರಿಲ್ 14 ರಂದು ಸೋಮವಾರ ಮುಂಜಾನೆ 8 ಗಂಟೆಗೆ ಭಾರವಾದ ಚೀಲ ಎತ್ತುವುದು. ಮಧ್ಯಾಹ್ನ 4 ಗಂಟೆಗೆ ರೂಢಗಿ ಗ್ರಾಮದಿಂದ ತೇರಿನ ಮಿನಿ ಹಗ್ಗವನ್ನು ಬರಮಾಡಿ ಕೊಳ್ಳುವುದು. ಮಾದುಲಿಂಗನ ದೇವಸ್ಥಾನ ದಿಂದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದ ವರೆಗೆ ಪಲ್ಲಕ್ಕಿ ಮಿನಿ. ಮತ್ತು ಕಳಸ ಮೆರವಣಿಗೆ ಮಾಡುವುದು. ಸಂಜೆ 5. ಗಂಟೆಗೆ ರಥೋತ್ಸವಕ್ಕೆ ಕಳಸ ಏರುವುದು. ನಂತರ ರಥೋತ್ಸವ ಜರುಗುವುದು. ರಾತ್ರಿ 9. ಕ್ಕೆ ಕಲಾ ಸಿಂಚನ ಮೆಲೋಡಿಸ್ ತಂಡದಿಂದ ಹಾಸ್ಯ ರಸ ಮಂಜರಿ ಕಾರ್ಯಕ್ರಮ ನಡೆಯಲಾಗುತ್ತದೆ. ಏಪ್ರಿಲ್ 15 ರಂದು ಮಂಗಳವಾರ ಜೋಡೆತ್ತುಗಳಿಂದ ಭಾರವಾದ ಕಲ್ಲು ಜಗ್ಗಿಸುವುದು ಸ್ಪರ್ಧೆ ನಡೆಯಲಿದೆ. ಸಂಜೆ 5. ಗಂಟೆಯಿಂದ ಬೆಳಗಿನ 6:00 ವರೆಗೆ ಪಲ್ಲಕ್ಕಿಯು ಹೊರಗಿನ ಮಠಕ್ಕೆ ಹೋಗಿ ಬರುವುದು. ಏಪ್ರಿಲ್ 16 ಬುಧವಾರ ರಂದು ಮುಂಜಾನೆ 10 ಗಂಟೆಗೆ ಗಾಡಿ ರೇಸ್ ನಡೆಯಲಿದೆ ಪುಟ್ಟಿ ಗಾಡಿಗೆ ಮಾತ್ರ ಅವಕಾಶ ಇರುವುದು. ರಾತ್ರಿ 10 ಗಂಟೆಗೆ ಶ್ರೀ ಯಲ್ಲಾಲಿಂಗೇಶ್ವರ ನಾಟ್ಯ ಸಂಘ ಗೋವಾ ಇವರಿಂದ. ಅಣ್ಣನ ಒಡಲು ಬಂಗಾರದ ಕಡಲು ಸಾಮಾಜಿಕ ನಾಟಕ ಪ್ರದರ್ಶನ ನಡೆಲಿದೆ. ಏಪ್ರಿಲ್ 17 ಗುರುವಾರ ದಂದು ಮುಂಜಾನೆ 10 ಗಂಟೆಗೆ ಗಟ್ಟಿ ಮೈದಾನದಲ್ಲಿ ರಾಜ್ಯಮಟ್ಟದ ತೇರ ಬಂಡಿ ಸ್ಪರ್ಧೆ ನಡೆಯಲಿದೆ. ರಾತ್ರಿ 10 ಗಂಟೆಗೆ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ ಗದಗ ಇವರಿಂದ ಅಕ್ಕ ಅಂಗಾರ ತಂಗಿ ಬಂಗಾರ ಹಾಸ್ಯ ಎಂಬ ನಾಟಕ ಪ್ರದರ್ಶನ ದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನ ವಾಗುವುದು ಎಂದು ಜಾತ್ರಾ ಕಮಿಟಿ ಯಿಂದ ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ