ಸಮಾಜಕ್ಕೆ ಹನುಮಪ್ಪ ನಾಯಕರ ಕೊಡುಗೆ ಅಪಾರ – ಶಾಸಕ ರಾಜುಗೌಡ ಪಾಟೀಲ್.

ಸಂಕನಾಳ ಏ.13

ಹೂವಿನ ಹಿಪ್ಪರಗಿ ಸಮೀಪದ ಸಂಕನಾಳ ಗ್ರಾಮದಲ್ಲಿ ಏಪ್ರಿಲ 9 ರಂದು ನಡೆದ ಹಂಡೆ ಹನುಮಪ್ಪ ನಾಯಕರ ಜಯಂತ್ಯೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಹಂಡೆ ಹನುಮಪ್ಪ ನಾಯಕನ ಭಾವ ಚಿತ್ರವನ್ನು ಕುಂಭಮೇಳ ಕುದುರೆ ಕುಣಿತ ಹಾಗೂ ಡಿಜೆ ಸೌಂಡ್ ದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಊರಿನ ಗ್ರಾಮಸ್ಥರು ಹನುಮಪ್ಪ ನಾಯಕನ ವೃತ್ತದ ವರೆಗೆ ಕರೆ ತರಲಾಯಿತು. ಜೀವನದಲ್ಲಿ ಹುಟ್ಟು ಸಹಜ ನಾವು ನಿಶ್ಚಿತ ಇವುಗಳ ಮಧ್ಯೆ ಸಮಾಜ ಸುಧಾರಣಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಇತಿಹಾಸ ನಿರ್ಮಿಸಿದ ಮಹಾನ್ ವ್ಯಕ್ತಿ ಹಂಡೆ ವಜೀರ್ ಕುಲ ತಿಲಕ ಎಂದು ಹನುಮಪ್ಪ ನಾಯಕರು ಅವರಾಗಿದ್ದಾರೆ. ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್ ಕುದುರೆ ಸಾಲವಾಡಗಿ ಮಾತನಾಡಿದರು. ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 539 ನೇ. ರಾಜ್ಯ ಹಂಡೆ ಹನುಮಪ್ಪ ನಾಯಕರ ಜಯಂತ್ಯೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಸಲುವಾಗಿ ದುಡಿದ ವ್ಯಕ್ತಿಯನ್ನು ಒಂದೇ ಸಮುದಾಯಕ್ಕೆ ಸೀಮಿತ ಗೊಳಿಸದೆ ಅವರು ಮಾಡಿದ ಕಾರ್ಯಗಳನ್ನು ಶ್ಲಾಘಿಸುವ ಮೂಲಕ ಅಂಥವರ ವ್ಯಕ್ತಿತ್ವ ಹಾಗೂ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಡಿಸಿ ಕೊಳ್ಳಬೇಕು ಎಂದು ಹೇಳಿದರು. ಮಾಜಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ್ ಮಾತನಾಡಿ ಹಂಡೆ ವಜೀರ ಸಮಾಜದ ಜನರು ಯಾವಾಗಲೂ ಶ್ರಮ ಜೀವಿಗಳು ರೈತಾಪಿ ವರ್ಗದಿಂದ ಬಂದವರು. ಅವರು ಪ್ರಾಮಾಣಿಕವಾಗಿ ದುಡಿದು ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತ ಬಂದವರು ಎಂದು ಹೇಳಿದರು. ಉಪನ್ಯಾಸಕ ಐ.ಬಿ ಹಿರೇಮಠ್ ಅವರು ಹಂಡೆ ವಜೀರ್ ಸಮಾಜದ ನಾಯಕ ಹನುಮಪ್ಪ ನಾಯಕನ ಹತ್ತು ಹಲವು ಕಾರ್ಯಗಳ ಕುರಿತು ಉಪನ್ಯಾಸ ನೀಡಿದರು. ಡಾ, ಪ್ರಭುಗೌಡ ಲಿಂಗದಹಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದರು ಪ್ರಾಸ್ತಾವಿಕವಾಗಿ ಗ್ರಾಮದ ಮುಖಂಡ ಶಿವನಗೌಡ ಬಿರಾದಾರ್ ಮಾತನಾಡಿದರು. ವೇದಿಕೆಯಲ್ಲಿ ಹಲವಾರು ಮಾತನಾಡಿದರು ವೇದಿಕೆಯಲ್ಲಿ ಸಾನಿಧ್ಯ ವಹಿಸಿದ್ದ ಜಮಖಂಡಿ ಯ ಆನಂದ ದೇವರು. ಕರ ಬಂಟನಾಳ ಹಿರೇಮಠದ ಶಿವಕುಮಾರ್ ಸ್ವಾಮೀಜಿ. ಪತ್ರಿವನ ಮಠದ ದ್ರಾಕ್ಷಾಯಿಣಿ ಅಮ್ಮನವರು ಆಶೀರ್ವಚನ ನೀಡಿದರು. ಈ ವೇಳೆ ಗಂಗಾಧರಯ್ಯ ಹಿರೇಮಠ್. ಮಲ್ಲಯ್ಯ ಹಿರೇಮಠ್. ರಾಜ್ಯಾಧ್ಯಕ್ಷರಾದ ಡಾ, ಎಸ್.ಎಸ್ ಪಾಟೀಲ್. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪು ನಾಯಕ್.ಜಿ ಎನ್ ಪಾಟೀಲ್.ಎಸ್‌ ಜಿ, ಪಾಟೀಲ್.ಆರ್ ಎಸ್ ಪಾಟೀಲ್. ದೇವೇಂದ್ರ ಗೋನಾಳ್. ಸಂಗನಗೌಡ ಯಂಕಂಚಿ. ಸಂಗನಗೌಡ ಕರ ಬಂಟನಾಳ. ವಿ.ಕೆ. ಪಾಟೀಲ್ ಸಿದ್ದನಗೌಡ. ಪಾಟೀಲ್. ಪ್ರೇಮ್ ಕುಮಾರ್ ಮ್ಯಾಗೇರಿ. ಎಸ್. ಎಸ್. ಚೌಧರಿ. ಸೇರಿದಂತೆ. ರಾಜು ಗೌಡ ಬಿರಾದಾರ್. ಸತೀಶ್ ಬಿರಾದರ್. ಶಾಂತಗೌಡ ಬಿರಾದಾರ್. ಮಹಂತಗೌಡ ಬಿರಾದ. ಶಿವನಗೌಡ ಬಿರಾದಾರ್. ಇತರರಿದ್ದರು. ಪ್ರಭಾಕರ್ ಕೇಡದ. ರಾಜುಗೌಡ ಬಿರಾದಾರ್. ನಿರೂಪಿಸಿದರು. ದೇವೇಂದ್ರ ಗೋನಾಳ ವಂದಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button