ಅಕಾಲಿಕ ಮಳೆಗೆ 3 ಎಕರೆ ಪಪ್ಪಾಯಿ ತೋಟಗಾರಿಕೆ ಬೆಳೆ ಸಂಪೂರ್ಣ ನಾಶ – ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರ ಹಾಕಿದ ರೈತ.

ಈಚಲ ಬೊಮ್ಮನಹಳ್ಳಿ ಏ.18

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈಚಲ ಬೊಮ್ಮನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 16 ರಂದು ಬುಧವಾರ ಸಾಯಂಕಾಲ 5:45 ರ ಸಮಯದಲ್ಲಿ ಗುಡುಗು ಮಿಂಚು ಬಿರುಗಾಳಿ ಸೇರಿ. ಸುರಿದ ಭಾರಿ ಮಳೆಗೆ ಪಿ.ಯಮನೂರು ಸಾಬ್ ಇವರು 3 ಎಕ್ಕರೆ ಪಪ್ಪಾಯಿ ತೋಟಗಾರಿಕೆ ಬೆಳೆಯನ್ನು ಬೆಳೆದಿದ್ದು ಈ ರೈತನ ಜಮೀನು ಕುಪ್ಪನಕೇರಿ ಕಂದಾಯ ಗ್ರಾಮಕ್ಕೆ ಸೇರಿದ್ದು ಸರ್ವೆ ನಂಬರ್ 360 ಆಗಿದ್ದು. ಈ ಜಮೀನಿನಲ್ಲಿ ಬೆಳೆಯ ಫಲವು ಬಂದಿದ್ದು ಕೈ ಸೇರುವ ಹಂತದಲ್ಲೇ ಪ್ರಕೃತಿಯ ವಿಕೋಪಕ್ಕೆ ನಾಶ ಆಗಿರುವುದಕ್ಕೆ ಯಮನೂರು ಸಾಬ್ ರೈತನು ತಾನು ಬೆಳೆದ ಫಲಕ್ಕೆ ಸರಿಸುಮಾರು 4 ರಿಂದ 5 ಲಕ್ಷ ಕ್ಕೂ ಹೆಚ್ಚಾಗಿ ಬೆಳೆಗೆ ಖರ್ಚು ಮಾಡಿದ್ದೇನೆ ಹಾಗೂ 3 ಎಕ್ಕರೆ ಜಮೀನಲ್ಲಿ ಕನಿಷ್ಠ 2500 ಗಿಡಗಳನ್ನು ನೆಟ್ಟಿದ್ದು. ಪ್ರತಿ ಗಿಡದಿಂದ ಕನಿಷ್ಠ 1.50 ಕ್ವಿಂಟಲ್ ನಷ್ಟು ಫಲ ಬಂದಿದ್ದು. ಬುಧುವಾರ ರಂದು ಸುರಿದ ಗಾಳಿ ಮಳೆಗೆ ಸಂಪೂರ್ಣವಾಗಿ 2500 ಪಪ್ಪಾಯಿ ಗಿಡಗಳು ನೆಲಕ್ಕುರುಳಿ ಎಲ್ಲಾ ಫಲವು ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ ಎನ್ನುವ ಗಾದೆಯಂತೆ.

ಈ ಬಡ ರೈತನ ಕೊರಳಿಗೆ ಪ್ರಕೃತಿಯಿಂದ ಸಂಪೂರ್ಣವಾಗಿ ಪಪ್ಪಾಯಿ ತೋಟವು ನಾಶವಾಗಿರುವುದಕ್ಕೆ ಯಮನೂರ್ ಸಾಬ್ ಹಾಗೂ ಕುಟುಂಬಸ್ಥರು ಹೊಲದಲ್ಲಿ ಬೆಳೆದ ಪಪ್ಪಾಯಿ ನೆಲಕ್ಕುಳಿರುವ ಗಿಡಗಳನ್ನು ಕಂಡು ಕಣ್ಣೀರು ಇಡುತ್ತಾ ತಮ್ಮ ಅಳಲನ್ನು ನಮ್ಮ ಸುದ್ದಿ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ಈ ಮೂಲಕ ತಿಳಿಸಿರುತ್ತಾರೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರದ ವತಿಯಿಂದ ಪ್ರಕೃತಿ ವಿಕೋಪದ ಅಡಿಯಲ್ಲಿ ನಾಶವಾಗಿರುವ ಈ ಪಪ್ಪಾಯಿ ತೋಟಕ್ಕೆ ಸರ್ಕಾರದಿಂದ ಪರಿಹಾರ ಕೊಡುವಂತೆ ತಮ್ಮ ಅಳಲನ್ನು ಹೇಳಿ ಕೊಂಡಿರುತ್ತಾರೆ. ಹಾಗೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಈಡಿಗರ ಸಂತೋಷ್ ಇವರು ಸಹ ಈ ರೈತರ ಪರಿಸ್ಥಿತಿಯನ್ನು ತಮ್ಮ ಗ್ರಾಮದ ರೈತರ ಕುರಿತು ನಮ್ಮ ಸುದ್ದಿ ವಾಹಿನಿಗೆ ತಿಳಿಸಿರುತ್ತಾರೆ. ಈ ವಿಷಯವನ್ನು ತಿಳಿದ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಭೂಮಿಯಲ್ಲಿ ನೀವು ಬೆಳೆದ ಫಲವು ನಷ್ಟವಾಗಿರುವ ಕುರಿತು ಮೇಲಿನ ಅಧಿಕಾರಿಗಳಿಗೆ ತರುವುದಾಗಿ ತಿಳಿಸಿದರು. ಹಾಗೆ ಪರಿಶೀಲಿಸಿ ಕಚೇರಿಗೆ ಪರಿಹಾರದ ಅರ್ಜಿ ಸಲ್ಲಿಸುವಂತೆ ತಿಳಿಸಿರುತ್ತಾರೆ. ಹಾಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಹ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪಪ್ಪಾಯಿ ಗಿಡಗಳು ನೆಲಕ್ಕೆ ಉರುಳಿರುವ ಹಾಗೂ ಮಳೆ ಗಾಳಿಗೆ ನಷ್ಟದ ಕುರಿತು ಬರೆದು ಕೊಂಡು ಹೋಗಿದ್ದಾರೆ. ಎಂದು ಯಮನೂರು ಸಾಬ್ ರೈತನು ತಿಳಿಸಿರುತ್ತಾರೆ.ಆದರೆ ಅದು ಏನೇ ಇರಲಿ ಮಾನ್ಯ ವಿಜಯನಗರ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಮೀರ್ ಅಹ್ಮದ್ ಖಾನ್ ರವರು ಸಂಬಂಧ ಪಟ್ಟಂತಹ ಸಚಿವರ ಸಮ್ಮುಖದಲ್ಲಿ ಚರ್ಚಿಸಿ ಹಿಂದುಳಿದ ತಾಲೂಕಿನ ಬಡ ರೈತರ ಕಣ್ಣೊರಿಸುವ ಕೆಲಸ ಆಗ ಬೇಕಾಗಿದೆ ಆದ್ದರಿಂದ ರೈತರ ಸಂಕಷ್ಟವನ್ನು ಅರಿತು ಕೂಡ್ಲಿಗಿ ತಾಲೂಕಿನ ಮಾನ್ಯ ಶಾಸಕರಾದ ಎನ್.ಟಿ ಶ್ರೀನಿವಾಸ್ ರವರು ಈ ಪ್ರಕೃತಿ ವಿಕೋಪದಿಂದ ನಾಶವಾಗಿರುವ ಪಪ್ಪಾಯಿ ಹಣ್ಣಿನ ಗಿಡಗಳ ನಷ್ಟವನ್ನು ಸರ್ಕಾರದೊಂದಿಗೆ ಚರ್ಚಿಸಿ ಈ ಬಡ ರೈತರಿಗೆ ಪರಿಹಾರ ಸಿಗಲಿ ಎನ್ನುವುದು ರೈತರ ಬೇಡಿಕೆಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button