ಅರ್ಜುಣಗಿ ಗ್ರಾಮದ ಸಮಸ್ತ ಆದರಣೀಯ ಪುಣ್ಯವಂತ ರಕ್ತ ದಾನಿಗಳು – ಆರೋಗ್ಯ ಹಬ್ಬದಲ್ಲಿ ಔದಾರ್ಯದ ಸೇವಾ ನೋಟ.

ಅರ್ಜುಣಗಿ ಬಿ.ಕೆ ಏ.18

ಇಂಡಿ ತಾಲೂಕಿನ ಅರ್ಜುಣಗಿ ಬಿ.ಕೆ ಗ್ರಾಮದ ಪವಿತ್ರ ಗೈಬಿಪೀರ ದೇವರ ಜಾತ್ರೆಯ ಅಂಗವಾಗಿ ಆಯೋಜನೆದ ಧಾರ್ಮಿಕ ಹಾಗೂ ಆರೋಗ್ಯದ ಹಬ್ಬವು ಈ ಬಾರಿ ಗ್ರಾಮದ ಜನತೆಗೆ ವೈಶಿಷ್ಟ್ಯಮಯ ಅನುಭವವಾಗಿ ನೆನಪಾಗಿ ಉಳಿಯಿತು. ಬೆಳಿಗ್ಗೆ ಯಿಂದ ಸಾಯಂಕಾಲದ ವರೆಗೂ ನಡೆದ ಈ ಪವಿತ್ರ ಕಾರ್ಯಕ್ರಮದಲ್ಲಿ 104 ಮಂದಿ ಪುಣ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನದಲ್ಲಿ ಪಾಲ್ಗೊಂಡರು. ಆದರೆ 22 ಮಂದಿ ರಕ್ತದಾನ ಮಾಡಲು ಯೋಗ್ಯರಾಗದೆ ತಿರಸ್ಕೃತರಾದರೂ, ಇತರೆ 82 ಮಂದಿಯಿಂದ ಶುದ್ಧ ರಕ್ತದ ಸಂಗ್ರಹ ನಡೆಯಿತು. ಈ ರಕ್ತದಾನ ಅಭಿಯಾನವು 334 ಜೀವಗಳನ್ನು ರಕ್ಷಿಸುವ ಮಹತ್ವ ಪೂರ್ಣ ಕಾರ್ಯಕ್ಕೆ ನಾಂದಿ ಬರೆದಿದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಈ ಸೇವೆಗೆ ಕೈಜೋಡಿಸಿದ ಆಯೋಜಕರು, ಅನ್ನದಾಸೋಹ ಸೇವೆ ಸಲ್ಲಿಸಿದವರು, ಹಣ್ಣಿನ ರಸ ಹಾಗೂ ಹಣ್ಣು ಹಂಪಲುಗಳನ್ನು ದಾನಿಸಿದ ದಾನಿಗಳು ಈ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಪ್ರತಿ ನಿಧಿಗಳು, ಗುರು ಹಿರಿಯರು, ಸಹೋದರ ಸಹೋದರಿಯರು, ನೌಕರ ಬಂಧುಗಳು ಸೇರಿ ಶ್ರದ್ದೆಯಿಂದ ಪಾಲ್ಗೊಂಡರು. ಈ ಎಲ್ಲರ ಸಹಕಾರದಿಂದ ಆರೋಗ್ಯದ ಹಬ್ಬವು ಯಶಸ್ವಿಯಾಗಿ ನೆರವೇರಿತು. ಈ ಸುದಿನದ ನೆನಪಿಗಾಗಿ ಮತ್ತು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿರುವ ತಮ್ಮೆಲ್ಲರ ಅನನ್ಯ ಸೇವೆಗೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಪೂಜಾ‌ರ್ ಅವರು ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button