ಸಂಗೀತ, ನೃತ್ಯಗಳಿಂದ ಜೀವನದಲ್ಲಿ ಶಿಸ್ತು ಹಿರಿಯ ಸಾಹಿತಿ – ಡಾ ವೃಷಭೇಂದ್ರ ಚಾರ್…!
ಕೆ.ಹೊಸಹಳ್ಳಿ ಏ.18

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ದಿವಂಗತ ಅಕ್ಕಸಾಲಿ ನೀಲಕಂಠ ಆಚಾರಿ ಹಾಗೂ ದಿವಂಗತ ಶ್ರೀಮತಿ ಹೂಲೆಮ್ ಇವರ 49 ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕೆ.ಎಂ ಎಸ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಂಗೀತ ಕಾರ್ಯಕ್ರಮ ಜರಗಿತು. ಹಿರಿಯ ಸಾಹಿತಿ ಡಾ, ವೃಷಭೇಂದ್ರ ಚಾರ್ ಮಾತನಾಡಿ ಸಂಗೀತ ನೃತ್ಯ ಕಲೆಗಳಿಂದ ಹೃದಯ ಸಂಪನ್ನತೆ. ಸಂಸ್ಕೃತಿ ಮತ್ತು ಮಾನವೀಯ ನೈತಿಕತೆ ಹೆಚ್ಚಿಸುವುದಲ್ಲದೆ ಶಿಸ್ತು ಬದ್ಧ ಜೀವನ ಸಾಗಿಸಲು ಸಾಧ್ಯ ಎಂದರು. ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ಮಾತನಾಡಿ ಸಂಗೀತದಿಂದ ತಮ್ಮ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಸಂಗೀತ ಕಲೆ ಜಾನಪದ ಸಾಹಿತ್ಯ ಉಳಿಸಿ ಬೆಳೆಸಲು ಇಂದಿನ ಯುವ ಜನತೆಗೆ ಇಂತಹ ಸಂಗೀತ ಕಾರ್ಯಕ್ರಮಗಳು ಪ್ರೇರಣೆಯಾಗಲಿ ಎಂದರು.

ಶರಣೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆಎಂ ಶಶಿಧರ ಮಾತನಾಡಿದರು. ಇದೇ ಸಂದರ್ಭದಲ್ಲಿ ಭಾಗವಹಿಸಿದ ಕಲಾವಿದರಾದ ಸೋಮಶೇಖರಯ್ಯ ಅಗ್ರಹಾರ. ಸುನಿಲ್ ಆಚಾರ. ಕುಮಾರಸ್ವಾಮಿ ಸೊಂಡೂರು. ನಾಗರಾಜ್ ನಿಂಬಳಗೆರೆ ಹಾಗೂ ಮಾರಿಕಾಂಬ ಭಜನಾ ಮಂಡಳಿಯ ಸದಸ್ಯರು ಹಾಗೂ ಇದೇ ವೇಳೆ ಎ ನೀಲಕಂಠ ಆಚಾರ್. ನಿರಂಜನ್ ಆಚಾರ್ ಶರಣಗೌಡರು ವಿಜಯ್ ಕುಮಾರ್, ಮಲ್ಲಿಕಾರ್ಜುನ, ಜಿ ಚಂದ್ರಪ್ಪ, ಜಿ ಎಂ,ಮಹದೇವಪ್ಪ, ಪ್ರದೀಪ್ ಅಕ್ಕಸಾಲಿ, ಸಪಾರೆ ರಾಮಕೃಷ್ಣ, ಸಪಾರೆ ಶಾಮಸುಂದರ, ಕೆ ಸುಭಾಸ್ ಚಂದ್ರ, ಡಾ. ಟಿ ಒಂಕರಪ್ಪ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷರು ಎನ್.ಎಸ್ ತಿಪ್ಪೇಸ್ವಾಮಿ, ಸಿದ್ದರಾಮೇಶ್ವರ, ಶರಣೇಶ್ವರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ ಹರ್ಷವರ್ಧನ, ವೃಷಭೇಂದ್ರ ಆಚಾರ್ ಕುಟುಂಬ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ವೀರೇಶ್.ಕೆ.ಹೊಸಹಳ್ಳಿ