ತಾಲೂಕ ಆಡಳಿತದಿಂದ ದಿವ್ಯ ನಿರ್ಲಕ್ಷ್ಯ ಎ.ಪಿ.ಜೆ. ಅಬ್ದುಲ್ ಕಲಾಂ ರವರ ವೃತ್ತಕ್ಕೆ ಅವಮಾನ — ಎಲ್.ಎಸ್.ಬಶೀರ್ ಅಹ್ಮದ್ ಆರೋಪ.
ಕೂಡ್ಲಿಗಿ ಆಗಷ್ಟ.15

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬೆಂಗಳೂರು ರಸ್ತೆಯ ಹಂಚಿನಲ್ಲಿರುವ ಎನ್.ಎಚ್. ಪಕ್ಕದಲ್ಲಿ ಇರುವಂತಹ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ರವರ ವೃತ್ತವನ್ನು ಮಾತ್ರ ತಾಲೂಕು ಆಡಳಿತ ದಿವ್ಯ ನಿರ್ಲಕ್ಷ್ಯ ಧೋರಣೆಯನ್ನು ತೋರಿರೋದು ಖಂಡಿಸಿ, ಆಗಸ್ಟ್ 14 ರಾತ್ರಿಯ ಸಮಯದಲ್ಲಿ 77ನೇ ಸ್ವಾತಂತ್ರೋತ್ಸವದ ಸಂಭ್ರಮ ದಿನಾಚರಣೆಯ ಅಂಗವಾಗಿ ಪಟ್ಟಣದ ಎಲ್ಲಾ ತಾಲೂಕು ಕಚೇರಿಗಳು ಹಾಗೂ ಮಹಾನ್ ನಾಯಕರ ವೃತ್ತಗಳು ದೀಪಾಲಂಕಾರಗಳಿಂದ ಕಂಗೊಳಿಸುವಂತೆ ಮಾಡಿದ್ದೂ ಹಾಗೂ ಪಟ್ಟಣದ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡುವಂತೆ ಪೂರ್ವಭಾವಿ ಸಭೆಗಳಲ್ಲಿ ತೀರ್ಮಾನಿಸಿದರು. ಆದರೂ ತಾಲೂಕು ಆಡಳಿತ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ರವರ ವೃತ್ತವನ್ನು ಮಾತ್ರ ದೀಪಾಲಂಕರಗಳಿಂದ ನಿರ್ಲಕ್ಷ್ಯ ಮಾಡಿದಕ್ಕೆ ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷರಾದ ಹಾಗೂ ಹಿರಿಯ ವಕೀಲರಾದ ಎಲ್. ಎಸ್. ಬಶೀರ್ ಅಹಮದ್ ಹಾಗೂ ಸಂಘಟನೆಯ ಮುಖಂಡರುಗಳು ತಾಲೂಕು ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ,

ಕಾರಣ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ರವರು ಭಾರತ ದೇಶದ ಪ್ರಥಮ ಪ್ರಜೆಯಂದು ಕರೆಯಲ್ಪಡುವ ಸಂವಿಧಾನದಲ್ಲಿ ಭಾರತ ದೇಶದ ಮಾಜಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿರುವ ಹಾಗೂ ಖ್ಯಾತ್ಯ ವಿಜ್ಞಾನಿಯಾದ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ರವರ ವೃತ್ತಕ್ಕೆ ಮಾತ್ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೂಡ್ಲಿಗಿ ಪಟ್ಟಣದ ಎಲ್ಲಾ ವೃತ್ತಗಳನ್ನು ದೀಪಗಳಿಂದ ಅಲಂಕರಿಸುವ ನಿರ್ಧಾರವನ್ನು ತೆಗೆದುಕೊಂಡು ಕೂಡ್ಲಿಗಿ ಪಟ್ಟಣದ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ರವರ ವೃತ್ತವನ್ನು ದೀಪಾಲಂಕಾರಗಳಿಂದ ಹಾಗೂ ಸ್ವಚ್ಛತೆ ಗೊಳಿಸದೆ ಇರುವುದನ್ನು ಕಂಡು ತಾಲೂಕು ಆಡಳಿತ ವಿರುದ್ಧ ನಿರ್ಲಕ್ಷ್ಯ ಮಾಡಿರುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆಡಳಿತಕ್ಕೆ ದೂರಿದ್ದಾರೆ ಹಾಗೂ ಕೂಡ್ಲಿಗಿ ಪಟ್ಟಣದಲ್ಲಿ ಮುಂದಿನ ದಿನಮಾನಗಳಲ್ಲಿ ಯಾವುದೇ ಮಹಾನ್ ನಾಯಕರ ಸರ್ಕಲ್ ಗಳನ್ನು ನಿರ್ಲಕ್ಷ ಮಾಡದಂತೆ ಜಿಲ್ಲಾ ಆಡಳಿತಕ್ಕೆ ತಾಲೂಕ ಆಡಳಿತದ ಅಧಿಕಾರಿಗಳಿಗೆ ನಿರ್ಲಕ್ಷ್ಯತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಈ ಸಂದರ್ಭದಲ್ಲಿ ವಿದ್ಯುತ್ ದೀಪಾಲಂಕಾರ ದಿಂದ ನಿರ್ಲಕ್ಷ್ಯ ಮಾಡಿದ್ದಕ್ಕೆ ನಾವು ಇಂದು ಮೇಣದ ದೀಪ ಹಚ್ಚುವುದರ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ