ವಿದ್ಯಾ ಪೋಷಕದಿಂದ ಆರ್ಥಿಕ ಸಹಾಯಕ್ಕೆ – ಅರ್ಜಿ ಆಹ್ವಾನ.

ಗದಗ ಮೇ.13

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಡುಬಡವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾ ಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆ ಅಡಿಯಲ್ಲಿ ೨೦೨೫-೨೬ ನೇ. ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ಸಹಾಯವನ್ನು ನೀಡಲು ಮುಂದಾಗಿದೆ.೧೦ ನೇ. ತರಗತಿ ನಂತರದ ಶಿಕ್ಷಣ ಮುಂದುವರಿಕೆಗಾಗಿ ಆರ್ಥಿಕ ಸಹಾಯ್ಕಕಾಗಿ ಅರ್ಜಿ ಹಾಕಲು ವಿದ್ಯಾರ್ಥಿಗಳು ಪ್ರಥಮ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮಾರ್ಚ್ ೨೦೨೫ ರಲ್ಲಿ ಬರೆದಿರ ಬೇಕು. ಮತ್ತು ಮೊದಲನೇ ಪ್ರಯತ್ನದಲ್ಲಿ ಶೇ. ೮೦% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ/ನಿಯರು ಈ ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ. ಪಿ.ಯು.ಸಿ. ಮೊದಲನೇ ವರ್ಷದ ವಾಣಿಜ್ಯ ಮತ್ತು ಡಿಪ್ಲೋಮಾ ಕೋರ್ಸ್ ಗೆ ಸೇರಲು ಬಯಸುವ ವಿದ್ಯಾರ್ಥಿ/ನಿಯರು ಈ ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ. ಕುಟುಂಬದ ವಾರ್ಷಿಕ ವರಮಾನ ರೂ. ೧,೨೦,೦೦೦/- ಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಯ ಪಾಲಕರು/ಪೋಷಕರು ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ವಿಜಯಪುರ, ಬಾಗಲಕೋಟೆ, ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ವಾಸವಿದ್ದವ ರಾಗಿರಬೇಕು. ವಿದ್ಯಾ ಪೋಷಕ ನರ್ಚರ್ ಮೆರಿಟ್ ಕಾರ್ಯಕ್ರಮವು ಸ್ವಯಂ ಸೇವಕರ ಲಭ್ಯತೆಯ ಮೇಲೆ ಅವಲಂಬಿತ ವಾಗಿರುತ್ತದೆ. ಕಾರಣ ಹೊಸ ಅರ್ಜಿಯನ್ನು ೨೦೨೫-೨೬ ಪರಿಗಣಿಸುವುದು ಕೆಲವೊಂದು (ಸ್ವಯಂ ಸೇವಕರು ಲಭ್ಯವಿರುವ) ಜಿಲ್ಲಾ ಅಥವಾ ತಾಲೂಕುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಧನ ಸಹಾಯದ ಅರ್ಜಿಯು ವಿದ್ಯಾಪೋಷಕ ಸಂಸ್ಥೆಯ ಅಂತರ್ಜಾಲ www.vidyaposhak.ngo ಲಭ್ಯವಿದೆ. ವಿದ್ಯಾರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಅದರಲ್ಲಿ ನಮೂದಿಸಿರುವ ಮಾಹಿತಿಯನ್ನು ತುಂಬಿ ಅಗತ್ಯ ದಾಖಲಾತಿಗಳನ್ನು ಅಪ್‌ಲೋಡ್ ಮಾಡಬೇಕು. ಆನ್‌ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ ೧೦, ೨೦೨೫. ಹೆಚ್ಚಿನ ಮಾಹಿತಿಗಾಗಿ ವಿದ್ಯಾ ಪೋಷಕ, ನಂ. ೩೦೭/೪ ಎ೧, ನಗರಕರ ಕಾಲೋನಿ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ದೂರವಾಣಿ ಸಂಖ್ಯೆ : ೦೮೩೬-೨೭೪೭೩೫೭ ನ್ನು ಸಂಪರ್ಕಿಸಬಹುದು.ಗದಗ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಡಾ.ಸಂಗಮೇಶ ಸಜ್ಜನರ ಮೊ- ೯೯೪೫೫೫೫೦೮೪, ಡಾ, ಪ್ರಭು ಗಂಜಿಹಾಳ ಮೊ ೯೪೪೮೭೭೫೩೪೬ ಡಾ, ಪಿ.ಎಸ್ ಕಣವಿ ಮೊ: ೯೪೪೯೧೨೧೬೮೮, ಪ್ರೊ,ಎಚ್.ಎನ್ ಕಾಳೆ ಮೊ: ೯೧೦೮೯೯೨೯೨೧ ಇವರನ್ನು ಸಂಪರ್ಕಿಸ ಬಹುದಾಗಿದೆ.

*****

ಡಾ, ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button