ಸಂಗಾಪುರ ಗ್ರಾಮ ಪಂಚಾಯತಿ ಕರ್ಮಕಾಂಡ – ಮತ್ತೊಂದು ಬಯಲು.
ಸಂಗಾಪುರ ಮೇ.13

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿದ ಅಮಾಯಕರಿಗೆ ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮ ಪಂಚಾಯತಿ ಪಿಡಿಓ ಅಕ್ತರ್ ಪಾಶ ಸಾಹೇಬ್ರು ಕೂಲಿ ಹಣ ನೀಡದಿರುವುದು ಬೆಳಕಿಗೆ ಬಂದಿದ್ದು. ತಾಲೂಕ ಪಂಚಾಯತಿಗೆ ಅಲೆಯುವ ದುಸ್ಥಿತಿ ಬಂದೋದಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮ ಪಂಚಾಯತಿಯ ದಾಖಲೆಗಳನ್ನು ಪರಿಶೀಲನೆ ಮಾಡಿದರೆ ಸರಕಾರದ ಹಣ ಯಾವ ರೀತಿ ಅಕ್ತರ್ ಪಾಶ ಲೂಟಿ ಮಾಡಿದ್ದಾನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ ಅರಿವಾಗಿ ಇಓ ಖಾಲಿದ್ ಅಹ್ಮದ್ ಪಿಡಿಓ ಅಕ್ತರ್ ಅವರನ್ನು ವಿಧಾನ ಸೌಧದ ಮೂರನೆ ಮಹಡಿಯಲ್ಲಿ ಸನ್ಮಾನಿಸುವುದು ಗ್ಯಾರಂಟಿ.

ಅಮಾಯಕ ಜನರ ದುಡಿದ ಕೂಲಿ ಹಣ ನೀಡಿ ಎಂದು ಕಚೇರಿಗೆ ಅಲೆಯುತ್ತಾರೆಂದರೆ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಇಓ ಖಾಲಿದ್ ಅಹ್ಮದ್ ಪಿಡಿಓ ಅಕ್ತರ್ ಪಾಶ ಅವರು ಕೂಲಿ ಕಾರ್ಮಿಕರಿಗೆ ನೆರಳಿನ ವ್ಯವಸ್ಥೆ ನೀಡದೆ ಬಿಸಿಲಲ್ಲಿ ದುಡಿಸುತ್ತಾರೆಂದರೆ ಅಮಾಯಕರು ಸತ್ತರೆ ಇಓ ಖಾಲಿದ್ ಅಹ್ಮದ್ ಹಾಗೂ ಪಿಡಿಓ ಅಕ್ತರ್ ಪಾಶರಿಗೆ ಖುಷಿಯಾಗುತ್ತದೆಂದು ಕಾರ್ಮಿಕರ ಕೂಗಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ