ಶ್ರೀ ಕೊಡೆಕಲ್ ಬಸವೇಶ್ವರರ ಅದ್ದೂರಿ – ಪಲ್ಲಕ್ಕಿ ಉತ್ಸವ.
ಗುಂಡಕರ್ಜಗಿ ಮೇ.16

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕೊಡೆಕಲ್ ಬಸವೇಶ್ವರ ಜಾತ್ರಾ ಮಹೋತ್ಸವವು ಕೊಡೆಕಲ್ ಮಠದ ಬಸಣ್ಣ ಮುತ್ಯಾವರ ಸಾನಿಧ್ಯದಲ್ಲಿ ಮೇ 19 ಮತ್ತು 20 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಜಾತ್ರೆ ನಡೆಯುವುದು. ಮೇ 19 ಸೋಮವಾರ ದಂದು ಬೆಳಿಗ್ಗೆ 4 ಗಂಟೆಗೆ ಗಂಗಸ್ಥಳ ದಿಂದ ಬಸವೇಶ್ವರ ದೇವಸ್ಥಾನದ ವರೆಗೆ ಭಕ್ತಾದಿಗಳು ದೀಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಹರಕೆಯನ್ನು ಬಸವೇಶ್ವರ ದೇವರಿಗೆ ಮುಟ್ಟಿಸುತ್ತಾರೆ. ಅಂದೆ ಬೆಳಿಗ್ಗೆ 10:00 ಗಂಟೆಗೆ ಊರಿನ ಎಲ್ಲಾ ಭಕ್ತಾದಿಗಳು ಉಪ್ಪಲ ದಿನ್ನಿ ಅವರ ಮನೆಯಿಂದ ಸಕಲ ವಾದ್ಯ ಗಳೊಂದಿಗೆ ಹಾಗೂ ಕೊಡೆಕಲ್ಲ ಬಸಣ್ಣ ಮುತ್ಯಾರವರಿಂದ ಬಸವೇಶ್ವರ ವಚನ ಹೇಳುವುದರ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿ ತಲುಪುವುದು. ಅಂದೇ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುತ್ತದೆ. ಅಂದೆ ರಾತ್ರಿ 10 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ನಾಟ್ಯ ಸಂಘ ಯಂಡಿಗೇರಿ ತಾಲೂಕ್ ಬಾದಾಮಿ ಜಿ. ಬಾಗಲಕೋಟ. ಮಹಾಂತೇಶ್ ಮಳಗಿ ಇವರ ಸಾರಥ್ಯದಲ್ಲಿ ಮಾನವಂತರ ಮಗ ಅರ್ಥಾತ್ (ಸಾಕು ಮಗ ಸರ್ದಾರ್) ಎಂಬ ಕೌಟುಂಬಿಕ ಹಾಸ್ಯಭರಿತ ನಾಟಕ ನಡೆಯುತ್ತದೆ. ಮೇ 20 ಮಂಗಳವಾರ ದಂದು ಬೆಳಿಗ್ಗೆ 11:00 ಗಂಟೆಗೆ ಉಪ್ಪಲ ದಿನ್ನಿಅವರ ಮನೆಗೆ ಮರಳಿ ಭಜನೆಗಳ ಮೂಲಕ ಪಲ್ಲಕ್ಕಿ ಹೋಗುತ್ತವೆ. ಎಂದು ಜಾತ್ರಾ ಕಮಿಟಿಯವರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ