ಅಂತರ್ ಜಾತಿ ಮದುವೆ ಆಗಿದ್ದಕ್ಕೆ ದ್ವೇಷ ದಿಂದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ – ಮೇಲ್ಜಾತಿಯ ಪುಢಾರಿಗಳು.
ರೋಣ ಮೇ.16

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ನಿವಾಸಿಯಾದ ದಲಿತ ಸಮುದಾಯಕ್ಕೆ ಸೇರಿದ ಅಕ್ಷತಾ ಹುನಸಿಮರದ ಎಂಬ ಯುವತಿ ಮತ್ತು ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಮಂಜುನಾಥ್ ಈರಪ್ಪ ಕಟಗಿ ಎಂಬ ಯುವಕ ಇವರಿಬ್ಬರು 4. ವರ್ಷದ ಇಂದೇ ಪ್ರೀತಿಸಿ ಅಂತರ್ ಜಾತಿ ವಿವಾಹ ಆಗಿರುತ್ತಾರೆ ಪ್ರೀತಿಸಿ ಮದುವೆ ಆದ ದಲಿತ ಸಮುದಾಯದ ಅಕ್ಷತಾ ಮತ್ತು ಮೇಲ್ಜಾತಿಯ ಸಮುದಾಯದ ಮಂಜುನಾಥ ಇವರು 2. ಮಕ್ಕಳೊಂದಿಗೆ ಅನ್ನೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ ಅಕ್ಷತಾಳ ಗಂಡ ಟ್ರ್ಯಾಕ್ಟರ್ ಡ್ರೈವರ್ ನಾಗಿ ಜೀವನ ಸಾಗಿಸುತ್ತಿರುತ್ತಾನೆ. ದಿನಾಂಕ್ 12-5-2025 ಸೋಮುವಾರ ರಂದು ರಾತ್ರಿ 9.30 ಗಂಟೆ ಸುಮಾರಿಗೆ ದಲಿತ ಸಮುದಾಯಕ್ಕೆ ಸೇರಿದ ಅಕ್ಷತಾಳ ಗಂಡ ಮಂಜುನಾಥ್ ಡ/ಸ ಹಡಗಲಿ ಮಾರ್ಗವಾಗಿ ಗದಗ ದಿಂದ ಸವಡಿ ಗ್ರಾಮದತ್ತ ಟ್ರ್ಯಾಕ್ಟರ್ ತೊಗೊಂಡು ಬರುತ್ತಿರುತ್ತಾನೆ ಸವಡಿ ಸಮೀಪದ ಕೆನಾಲ್ ಹತ್ತಿರ ಎದುರಿಗೆ ಬುಲೋರೋ ವಾಹನದಲ್ಲಿ ಸಂಧಿಗವಾಡ ಗ್ರಾಮದ ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಬಲಾಡ್ಯ ವ್ಯಕ್ತಿಗಳು ರಾಜುಗೌಡ ಪಾಟೀಲ್ ಮತ್ತು ಆತನ ಸಹಚರರು ಪರ್ವತಗೌಡ ಸೇರಿದಂತೆ 5. ಜನ ಸೇರಿಕೊಂಡು ಮಂಜುನಾಥನ್ನು ತಡೆದು ಕ್ಷುಲಕ ಕಾರಣಕ್ಕೆ ಹೆಡ್ ಲೈಟ್ ಡಿಂಪೆಲ್ ಕೊಡುತ್ತಿಲ್ಲವೆಂದು ದಲಿತ ಮಹಿಳೆಯನ್ನು ಮದುವೆಯಾದ ಮಂಜುನಾಥನ್ನು ರಾಜುಗೌಡ ಮತ್ತು ಪರ್ತಗೌಡ ಸೇರಿಕೊಂಡು ಹಲ್ಲೆ ಮಾಡಿ ಹೋಗಿರುತ್ತಾರೆ. ಹಲ್ಲೆಗೆ ಒಳಗಾದ ಅಕ್ಷತಾಳ ಗಂಡ ಮಂಜುನಾಥ ಮತ್ತು ಸಂಬಂಧಿಕರು ಸೇರಿ ಕೊಂಡು ಮಾರಣಾಂತಿಕ ಹಲ್ಲೆ ಮಾಡಿದ ರಾಜುಗೌಡ ಮತ್ತು ಪರ್ತಗೌಡ ಅವರ ತಂಡದ ವಿರುದ್ಧ ರೋಣ ಪೊಲೀಸ್ ಠಾಣೆಗೆ ದೂರು ಕೊಡಲು ಹೊರಟಿರುತ್ತಾರೆ. ಹೋರಟ ಸಮಯದಲ್ಲಿ ಸಂಧಿಗವಾದ ಗ್ರಾಮಸ್ಥರು ಮತ್ತು ಸವಡಿ ಗ್ರಾಮಸ್ಥರು ಅಕ್ಷತಾ ಮತ್ತು ಮಂಜುನಾಥನನ್ನು ತಡೆದು ದೂರು ಕೊಡುವುವದು ಬೇಡ ಹಿರಿಯರ ಸಮ್ಮುಖದಲ್ಲಿ ಹೇಳಿ ಮುಗಿಸೋಣ ದೂರು ಕೊಡಬೇಡಿ ಎಂದು ತಡೆದಿರುತ್ತಾರೆ. ಬಳಿಕ ದಿನಾಂಕ 14-5-2025 ಬುಧವಾರ ರಂದು ಹಿರಿಯರ ಸಮ್ಮುಖದಲ್ಲಿ ಬಗೆಹರುಸುವುದಾಗಿ ಅಕ್ಷತಾ ಮತ್ತು ಅಕ್ಷತನ ಗಂಡನಾದ ಮಂಜುನಾಥ್ ಹಾಗೂ ಅಕ್ಷತನ ಅಣ್ಣನಾದ ಮಂಜುನಾಥ ಮಲ್ಲಪ್ಪ ಹುನಸಿಮರದ ಮತ್ತು ಮಂಜುನಾತನ ಗೆಳೆಯರಾದ ಅನ್ವರಸಾಬ ಬಾಬುಸಾಹೇಬ ನದಾಫ್ ಚಿಕ್ಕಮನ್ನೂರು ಗ್ರಾಮದಲ್ಲಿ ಇರುವ ರಾಜುಗೌಡ ಪಾಟೀಲ್ ಪೆಟ್ರೋಲ್ ಪಂಪ್ ಗೆ ಮಧ್ಯಾಹ್ನನ 12.30 ಸುಮಾರಿಗೆ ಕರೆಸಿ ರಾಜುಗೌಡ ಪಾಟೀಲ್.ತಿಪ್ಪನಗೌಡ ಹುಲ್ಲೂರು. ವೀರನಗೌಡ ಬಂಗ್ಲಿ.ಪುಲಿಕೇಶಗೌಡ ಬಂಗ್ಲಿ. ಗೌಡಪ್ಪಗೌಡ ಪಾಟೀಲ.ಕೃಷ್ಣಾನಗೌಡ. ರಾಮನಗೌಡ ಪಾಟೀಲ್. ಮಲ್ಲಪ್ಪ ಟಕೆದ ಮೇಲ್ಜಾತಿಗೆ ಸೇರಿದ ಇವರೆಲ್ಲರೂ ಕೂಡಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ನಿಂದಣೆ ಮಾಡುವದರೊಂದಿಗೆ ಅಕ್ಷತಾ.ಮಂಜುನಾಥ. ಅಕ್ಷತನ ಅಣ್ಣನಾದ ಮಂಜುನಾಥ ಅನ್ವರಸಾಬ ಈ ನಾಲ್ಕು ಜನರನ್ನು ಪೆಟ್ರೋಲ್ ಪಂಪಿನಲ್ಲಿ ಮನಬಂದಂತೆ ತಳಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.

ಅಂತರ್ ಜಾತಿ ವಿವಾಹ ಆಗಿದ್ದಕ್ಕೆ ದ್ವೇಷದಿಂದ ಹಲ್ಲೆ ಮಾಡಿರುವ ಎಂಟು ಜನ ವಿರುದ್ಧ ಸಧ್ಯ ರೋಣ ಪೊಲೀಸ್ ಠಾಣಾದಲ್ಲಿ ಎಸ್ಸಿ/ಎಸ್ಟಿ ಪ್ರಕರಣ ದಾಖಲಾಗಿದೆ. ಸದ್ಯ 8. ಜನ ಆರೋಪಿ ಪೈಕಿ 4. ಜನರನ್ನು ಪೊಲೀಸ್ ವಶಪಡಿಸಿ ಕೊಂಡಿದೆ ಇನ್ನೂಳಿದ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸ ಇಲಾಖೆ ಕಾರ್ಯಾಚರಣೆ ನಡೆಸಿದೆ. ಇನ್ನೂಳಿದ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿದವರಿಗೆ ಕಾನೂನು ರುಚಿ ತೋರಿಸ ಬೇಕೆಂದು ರೋಣ ತಾಲೂಕು ಮಟ್ಟದ ದಲಿತ ಮುಖಂಡರ ಒತ್ತಾಯವಾಗಿದೆ. ನಂತರ ನಮ್ಮ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಅಕ್ಷತಾ ಕಟಗಿ ಈ ಘಟನೆ ಉದ್ದೇಶ ಪೂರ್ವಕವಾಗಿ ಆಗಿರುವ ಘಟನೆ ದಲಿತ ಸಮುದಾಯದವಳು ನಾನು ಅಂತರ್ ಜಾತಿ ವಿವಾಹ ಆಗಿದ್ದಕ್ಕೆ ನಮ್ಮ ಗಾಣಿಗ ಸಮುದಾಯಕ್ಕೆ ಅವಮಾನ ಆಗಿದೆ. ಎಂದು ಈ ಎಂಟು ಜನರು ನನ್ನ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಗಾಣಿಗ ಸಮುದಾಯಕ್ಕೆ ಸೇರಿದ ಮಂಜುನಾಥ ಮತ್ತು ದಲಿತ ಸಮುದಾಯದವಳಾದ ನಾನು ಪ್ರೀತಿಸಿ ಮದುವೆ ಆಗಿರುವದರಿಂದ ಉದ್ದೇಶ ಪೂರ್ವಕವಾಗಿ ನನ್ನ ಕುಟುಂಬ ದವರ ಮೇಲೆ ಮತ್ತು ನನ್ನ ಗಂಡನ ಮೇಲೆ ದ್ವೇಷದ ಹಗೆ ಸಾದಿಸುತ್ತಿದ್ದಾರೆ ಈ 8. ಜನರಿಂದ ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಇರುವದರೊಂದಿಗೆ ನಮ್ಮ ನಮ್ಮ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆದಷ್ಟು ಬೇಗ ಮಾರಣಾಂತಿಕ ಹಲ್ಲೆ ಆರೋಪಿಗಳನ್ನು ಬಂಧಿಸಬೇಕು ಎಂದ ಅಕ್ಷತಾ ಕಟಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮೇಲ್ಜಾತಿಯ ಬಲಾಢ್ಯ ವ್ಯಕ್ತಿಗಳ ಅಟ್ಟಹಾಸ ಇನ್ನೂ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾಯ್ದು ನೋಡೋಣ, ಸದ್ಯ ರೋಣ ಠಾಣೆಯ ಪೊಲೀಸರು 4. ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಉಳಿದ 4. ಜನ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಸೂಕ್ತ ಬಂದೋಬಸ್ತ್ ಒದಗಿಸ ಬೇಕೆಂದು ರೋಣ ತಾಲೂಕಿನ ಡಿ.ಎಸ್.ಎಸ್ ಮುಖಂಡರು ಆಗ್ರಹಿಸಿದ್ದಾರೆ.
ಬಾಕ್ಸ್ :-
ಇಷ್ಟೆಲ್ಲಾ ಘಟನೆ ಆದರೂ ಕೂಡ ಈ ಎಸ್ಸಿ/ಎಸ್ ಟಿ ಪ್ರಕರಣ ದಾಖಲಾದ 3. ದಿನ ಗತಿಸುತ್ತಾ ಬಂದರು ಕೂಡ 8. ಜನ ಆರೋಪಿ ಪೈಕಿ 4. ಜನ ಮಾತ್ರ ವಶಕ್ಕೆ ಪಡೆದು ಕೊಂಡಿರುತ್ತಾರೆ. ಇನ್ನೂಳಿದ ಆರೋಪಿಗಳನ್ನು ವಶಪಡಿಸಿ ಕೊಳ್ಳಲು ವಿಳಂಬ ನೀತಿಗೆ ಕಾರಣವೇನು ಸಾಹೇಬ್ರೆ ಎಂದು ಪ್ರಕರಣದ ತನಿಖಾ ಅಧಿಕಾರಿಗಾಳಿಗೆ ರೋಣ ತಾಲೂಕ ದಲಿತ ಮುಖಂಡರು ನರಗುಂದ DYSP ಗೆ ದೂರವಾಹಿನಿ ಮೂಲಕ ಕರೆ ಮಾಡಿ ಕೇಳಿದ್ರೆ ನಮ್ಮ ಕೆಲಸ ನಾವು ಮಾಡುತ್ತೆವೆ. ನೀವು ನಮಗೆ ಕರೆ ಮಾಡಿ ಕೇಳುವ ಅವಶ್ಯಕತೆ ಇಲ್ಲವೆಂದು ದಲಿತ ಮುಖಂಡರಿಗೆ ಅವಮಾನ ಗೊಳಿಸಿದ್ದಾರೆ ಎಂದು ದಲಿತ ಮುಖಂಡರ ಆಕ್ರೋಶ ವ್ಯಕ್ತಪಡೆಸಿದ್ದಾರೆ. ವಿಳಂಬಕ್ಕೆ ಅವಕಾಶ ಕೊಡದೆ ಆದಷ್ಟು ಶೀಘ್ರವಾಗಿ ಇನ್ನೂಳಿದ ಆರೋಪಿಗಳನ್ನು ವಶಪಡಿಸಿ ಕೊಳ್ಳುವುದರ ಜೊತೆಗೆ ಮಾರಣಾಂತಿಕ ಹಲ್ಲೆಗೊಳಗಾದ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸ ಬೇಕೆಂದು ನಮ್ಮ ಮಾಧ್ಯಮದೊಂದಿಗೆ ಅಭಿಪ್ರಾಯ ವ್ಯಕ್ತಪಡೆಸಿದ್ದಾರೆ ಎಂದು ವರದಿಯಾಗಿದೆ.