ಖಾಸಗಿ ಶಾಲಾ ಕಾಲೇಜಿನಲ್ಲಿ ಡೊನೇಷನ್ ಹಾವಳಿಯನ್ನು ತಡೆ ಗಟ್ಟಲಿಕ್ಕಾಗಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಪತ್ರ – ಚಳುವಳಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಒತ್ತಾಯ.
ಸಿಂಧನೂರು ಮೇ.16

ಸಿಂಧನೂರು ತಾಲೂಕಿನಾದ್ಯಂತ ಇರುವಂತ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವಂತ ಕಾಲೇಜು ಶಾಲೆಗಳ ಆಡಳಿತ ಮಂಡಳಿಯವರು, ಮನಸೋ ಇಚ್ಛೆ ಶುಲ್ಕ ಪಡೆಯುತ್ತಿವೆ . ಬಹುತೇಕ ಖಾಸಗಿ ಕಾಲೇಜ್ ಹಾಗೂ ಶಾಲೆಗಳಲ್ಲಿ ಡೊನೇಷನ್ ಮನಬಂದಂತೆ ವಸೂಲಿ ಮಾಡಲು ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರೂ ಶಿಕ್ಷಣ ಇಲಾಖೆಯ ಜಿಲ್ಲೆಯ ಹಾಗೂ ಪದವಿ ಪೂರ್ವ ಉಪ ನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸರ್ಕಾರ ತಮಗೆ ಯಾವುದೇ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ 2025-26 ನೇ. ಸಾಲಿನಲ್ಲಿ ಪ್ರವೇಶ ಶುಲ್ಕ, ಸಮವಸ್ತ್ರ ಶೂ ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್, ಭೋದನಾ ಶುಲ್ಕ, ಬುಕ್, ನೋಟ್ಸ್ ಹೀಗೆ ಸೇರಿದಂತೆ ವಿವಿಧ ಶುಲ್ಕವನ್ನು ಹೆಚ್ಚಳ ಮಾಡಿ ಡೊನೇಷನ್ ಸಹಿತ ಹಣ ವಸೂಲಿ ಮಾಡಲು ಖಾಸಗಿ ಕಾಲೇಜುಗಳ ಹಾಗೂ ಶಾಲೆಗಳು ಮುಂದಾಗಿವೆ.
ಸರ್ಕಾರದ 1983 ಶಿಕ್ಷಣ ಕಾಯ್ದೆಯನ್ನು ಉಲ್ಲಂಘನೆ ಮಾಡಿ ರಾಜ್ಯದ ಬಹುತೇಕ ಶಾಲೆಗಳಲ್ಲಿ ಬಟ್ಟೆ, ಶೂ ಸಾಕ್ಸ್, ನೋಟ್ ಬುಕ್ ಗಳನ್ನು ಶಾಲೆಗಳಲ್ಲಿ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರ ಹಾಗೂ ಶಿಕ್ಷಣ ಇಲಾಖೆಯ 1983 ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವ ಕಾಲೇಜು ಹಾಗೂ ಶಾಲೆಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಏಕೆಂದರೆ1983 ರ ಶಿಕ್ಷಣ ಕಾಯಿದೆ ಪ್ರಕಾರ ಎಲ್ಲಾ ಖಾಸಗಿ ಕಾಲೇಜಗಳ ಹಾಗೂ ಶಾಲೆಗಳು ಪ್ರವೇಶಾತಿಗೆ ಖಾಲಿ ಇರುವ ಸೀಟುಗಳನ್ನು ತಮ್ಮ ಕಾಲೇಜುಗಳ ಹಾಗೂ ಶಾಲೆಯ ಸೂಚನಾ ಫಲಕದಲ್ಲಿ ಹಾಕಬೇಕು, ಮತ್ತು ರೋಸ್ಟರ್ ನಿಯಮ ಜಾರಿ ಮಾಡಿ, ಶುಲ್ಕವನ್ನು ನಿಗದಿ ಗೊಳಿಸಿ ಕಾಲೇಜು ಹಾಗೂ ಶಾಲೆಯ ಮುಂಭಾಗದಲ್ಲಿ ಹಾಕಬೇಕೆಂದು ನಿಯಮ ಇದ್ದರು ಸಿಂಧನೂರು ತಾಲೂಕಿನಾದ್ಯಂತ ಇರುವಂತ ಯಾವ ಕಾಲೇಜುಗಳು ಹಾಗೂ ಶಾಲೆಗಳು ಸಹ ಈ ನಿಯಮವನ್ನು ಅನುಸರಿಸುತ್ತಿಲ್ಲ.
ಖಾಸಗಿ ಕಾಲೇಜ್ ಹಾಗೂ ಶಾಲೆಯ ಆಡಳಿತ ಮಂಡಳಿಯ ಜೊತೆ ಇಲಾಖೆಯ ಅಧಿಕಾರಿಗಳು ಹೊಂದಾಣಿಕೆ ಮಾಡಿ ಕೊಂಡಿದ್ದಾರೆ ಎಂಬ ವಿದ್ಯಾರ್ಥಿಗಳ ಪೋಷಕರ ನೊಂದ ಮಾತುಗಳಾಗಿ ಬಿಟ್ಟಿವೆ ಖಾಸಗಿ ಕಾಲೇಜುಗಳ ಶಾಲೆಗಳಿಗೆ ಸರಿಯಾದ ನಿಯಂತ್ರಣ ಇಲ್ಲದೆ ವಿದ್ಯಾರ್ಥಿಗಳ ಪೋಷಕರಿಂದ ಸುಮಾರು ಹಣವನ್ನು ವಸೂಲಿ ಮಾಡುತ್ತಿವೆ. RTE ಅಡಿಯಲ್ಲಿ ಹಿಂದುಳಿದ ಮತ್ತು ದುರ್ಬಲ ಮಕ್ಕಳಿಗೆ 25% ಮಾಡಿದ್ದರು ಸಹ ಖಾಸಗಿ ಶಾಲೆಗಳು ಸರಿಯಾಗಿ ಅನುಸರಿಸುತ್ತಿಲ್ಲ. ಸೂಚನಾ ಫಲಕದಲ್ಲಿ ಅಳವಡಿಸ ಬೇಕು ಎಂದು ಸರ್ಕಾರದ ಆದೇಶಗಳು ಇದ್ದರೂ ಸಹ ಅವುಗಳನ್ನೆಲ್ಲ ಗಾಳಿಗೆ ತೂರಿ ತಮ್ಮ ಮನ ಬಂದಂತೆ ಶಿಕ್ಷಣದ ಹೆಸರಿನಲ್ಲಿ ಹಣವನ್ನು ಲಪಟಾಯಿಸಿ ಕೊಳ್ಳುತ್ತಿದ್ದು ಇವರ ಕಾಯಕವಾಗಿ ಬಿಟ್ಟಿದೆ ಇದರಿಂದ ಕಾಲೇಜ್ ಹಾಗೂ ಶಾಲೆಗಳ ಆಡಳಿತ ಮಂಡಳಿ ಅವರಿಗೆ ಯಾರು ಹೇಳೋರಿಲ್ಲ ಕೇಳೋರಿಲ್ಲದಂತಾಗಿ ಬಿಟ್ಟಿದ್ದರಿಂದ ತಾವುಗಳು ಗಂಭೀರವಾಗಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಪದವಿ ಪೂರ್ವ ಉಪ ನಿರ್ದೇಶಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಕೂಡಲೇ ಕಟ್ಟು ನಿಟ್ಟಿನ ಶಿಸ್ತಿನ ಕ್ರಮ ಕೈಗೊಂಡು ಈಗ ನಡೆಯುತ್ತಿರುವ ಹಗಲು ದರೋಡೆ ಡೋನೇಷನ ವಸೂಲಿಯ ಹಾವಳಿಯನ್ನು ಕೂಡಲೆ ತಡೆಗಟ್ಟಿ ವಿದ್ಯಾರ್ಥಿಗಳ ಪಾಲಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಸಮಿತಿ ಸಿಂಧನೂರು ವತಿಯಿಂದ ದಿನಾಂಕ 16/5/2025 ರಂದು ಪತ್ರ ಚಳುವಳಿಯ ಮೂಲಕ ಸಿಂಧನೂರು ತಹಸಿಲ್ದಾರರ ಮುಖಾಂತರ ರಾಯಚೂರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ.
ಎಂದು ಸಂಘಟಕರುಗಳಾದ ಕೆ.ಶಂಕರ್ ನಂದಿಹಾಳ ಕಲ್ಯಾಣ ಕರ್ನಾಟಕ ಉಸ್ತುವಾರಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಇವರ ನೇತೃತ್ವದಲ್ಲಿವಿರುಪಾಕ್ಷಿ ಸಾಸಲಮರಿ ತಾಲೂಕ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ, ನಾಗಲಿಂಗ ಜವಳಗೇರಾ ಮಲ್ಲಿಕಾರ್ಜುನ ಕುನ್ನಟಗಿ ಸಿದ್ದರಾಮೇಶ್ವರ ಸುಲ್ತಾನ ಪುರು ಮುದುಕಪ್ಪ ಹೊಸಳ್ಳಿ ಕ್ಯಾಂಪ್, ಸುಮಾರು ನೂರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.