ನಿರಹಂಕಾರಿ ನಿರಾಭಿಮಾನರು ಸ್ವಾಮಿ ವಿವೇಕಾನಂದರು – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಮೇ.17

ವಿಶ್ವ ವಿಖ್ಯಾತ ಸ್ವಾಮಿ ವಿವೇಕಾನಂದರು ನಿರಹಂಕಾರಿ ನಿರಾಭಿಮಾನದ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ನಗೇಂದ್ರ ನಾಥ ಗುಪ್ತ” ನ ಸ್ಮೃತಿಗಳ ಬಗ್ಗೆ ಆಶೀರ್ವಚನ ನೀಡಿದರು.

ಈ ಸತ್ಸಂಗದ ಆರಂಭದಲ್ಲಿ ಭಜನೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ನಡೆಸಿ ಕೊಟ್ಟರೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಕುಮಾರಿ ನಿಶ್ಕಲಾ ಹಾಗೂ ಕುಮಾರಿ ಮನಸಿರಿ ಪಠಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಕೀರ್ತನ ಅನಿಲ್, ಶ್ರೀಮತಿ ಜಿ.ಯಶೋಧಾ ಪ್ರಕಾಶ್, ಎಂ.ಗೀತಾ ನಾಗರಾಜ್, ಗಗನ್, ಗಮನ್, ಗೀತಾ ವೆಂಕಟೇಶ್ ರೆಡ್ಡಿ, ರತ್ನಮ್ಮ ಚೆನ್ನಬಸಪ್ಪ, ಯತೀಶ್.ಎಂ ಸಿದ್ದಾಪುರ, ಸಿ.ಎಸ್ ಭಾರತಿ, ವನಜಾಕ್ಷಿ ಮೋಹನ್, ಮಂಜುಳ ಉಮೇಶ್, ಸುಧಾಮಣಿ, ಕಾವೇರಿ ಸುರೇಶ್ ಯಾದವ್, ಸುಮನ ಕೋಟೇಶ್ವರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.