ರಸ್ತೆ ಬಂದ್ ಮಾಡಿ – ರೈತರಿಂದ ಪ್ರತಿಭಟನೆ.
ಮಾನ್ವಿ ಮೇ.22
ಸರಕಾರ ಜೋಳ ಖರೀದಿ ಕೇಂದ್ರದ ಮೂಲಕ ನೋಂದಣಿ ಮಾಡಿದ ರೈತರ ಜೋಳವನ್ನು ಖರೀದಿ ಮಾಡದ ಹಿನ್ನೆಲೆಯಲ್ಲಿ ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ರೈತರು ರಾಜ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ಖರೀದಿ ಕೇಂದ್ರದ ಮೂಲಕ ಯಾವ ರೀತಿಯಲ್ಲಿ ಕಾನೂನು ಬದ್ಧವಾಗಿ ಜೋಳ ಖರೀದಿ ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಕಾಳಜಿ ವಹಿಸದ ಕಾರಣ ರೈತರ ದಿವಾಳಿಯಾಗಿ ರಸ್ತೆಗಿಳಿಯಲು ಕಾರಣವಾಗಿದೆ.
ರಾqಯಚೂರು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನೋಂದಣಿ ಮಾಡಿದ ರೈತರ ಜೋಳವನ್ನು ಖರೀದಿ ಮಾಡುತ್ತಿಲ್ಲದ ಕಾರಣ ರೈತರ ಜೋಳಕ್ಕೆ ಏನಾದರು ಉಳು ಬಿದ್ದರೆ ನಷ್ಟ ಭರಿಸುವವರು ಯಾರು, ನಮಗೆ ನ್ಯಾಯಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ