ಕೆ.ನೇಮಿರಾಜ ನಾಯ್ಕ್ ಶಾಸಕರಿಂದ ಕುರಿಗಾಹಿಗಳಿಗೆ – ಗುರುತಿನ ಚೀಟಿ ವಿತರಣೆ.
ಕೊಟ್ಟೂರು ಮೇ .22

ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಕೊಟ್ಟೂರು ವತಿಯಿಂದ ದಿನಾಂಕ 21.05.2025 ರಂದು ವಲಸೆ / ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಕೆ.ನೇಮಿರಾಜ ನಾಯ್ಕ್ ಶಾಸಕರು ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಗುರುತಿನ ಚೀಟಿ ಕುರಿಗಾಹಿಗಳಿಗೆ ನೀಡಲಾಯಿತು. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡುವುದರ ಮೂಲಕ ಇವರಿಗೆ ಬರುವ ಸೌಲಭ್ಯಗಳನ್ನು ನಿಗಮದ ಮೂಲಕ ಉಚಿತವಾಗಿ ಔಷಧಿ ವೈದ್ಯ ತಪಾಸಣೆ ಹಾಗೂ ಕುರಿಗಾಹಿಗಳಿಗೆ ಬೇಕಾಗಿರುವ ಸೌಲಭ್ಯಗಳನ್ನು ವಲಸೆ ಮತ್ತು ಸಂಚಾರಿ ಕುರಿಗಾಹಿಗಳಿಗೆ ಒದಗಿಸಲು ಅನುಕೂಲವಾಗುತ್ತದೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಉಜ್ಜಿನಿ ರುದ್ರಪ್ಪ ಅಧ್ಯಕ್ಷರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಕೊಟ್ಟೂರು, ತೋಟದ ರಾಮಣ್ಣ ಉಪಾಧ್ಯಕ್ಷರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಕೊಟ್ಟೂರು, ವೀಣಾ ವಿವೇಕಾನಂದ ಗೌಡ ಸದಸ್ಯರು ಪಟ್ಟಣ ಪಂಚಾಯಿತಿ ಕೊಟ್ಟೂರು, ಡಾ. ಚಂದ್ರ ನಾಯ್ಕ ಎಂ ಮುಖ್ಯ ಪಶು ವೈದ್ಯಾಧಿಕಾರಿಗಳು,ಡಾ. ಕೊಟ್ರೇಶ್ ವಿ ಕೆ ಪಶುವೈದ್ಯಾಧಿಕಾರಿಗಳು, ಡಿ ಯೋಗೇಶ್ವರ ಹಿ.ಪ.ವೈ.ಪ, ಮಲ್ಲಿಕಾರ್ಜುನ ಮತ್ತು ಎಂ ಎಸ್ ಶಾಂತಕುಮಾರಿ ಕಿ. ಪ. ವೈ. ಪ, ಮೂಗಣ್ಣ ಹೊಸಕೋಡಹಳ್ಳಿ, ಪರಸಪ್ಪ, ಹಾಗೂ ಅನೇಕ ಕುರಿಗಾಹಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಎಸ್.ಕೊಟ್ಟೂರು